ನೂರಾನಿ ಯತೀಂ ಖಾನ - ದಾರುಲ್ ಮಸಾಕೀನ್ಗೆ ಪದಾಧಿಕಾರಿಗಳ ಆಯ್ಕೆ
ಯು.ಎಸ್. ಅಬೂಬಕ್ಕರ್, ಎನ್.ಎ.ಮುಹಮ್ಮದ್ ಇಕ್ಬಾಲ್, ಹಾಜಿ ಅಬ್ದುಲ್ ಹಮೀದ್
ಮಂಗಳೂರು, ಆ.27: ಕೋಟೆಕಾರ್ ಸಮೀಪದ ಕುಂಪಲ ನೂರಾನಿ ಯತೀಂ ಖಾನ ಮತ್ತು ದಾರುಲ್ ಮಸಾಕೀನ್ಗೆ 2024-27ನೇ ಸಾಲಿನ ಪದಾಧಿಕಾರಿಗಳನ್ನು ರವಿವಾರ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಹಾಜಿ ಯು.ಎಸ್. ಅಬೂಬಕ್ಕರ್,ಪ್ರಧಾನ ಕಾರ್ಯದರ್ಶಿಯಾಗಿ ಎನ್.ಎ.ಮುಹಮ್ಮದ್ ಇಕ್ಬಾಲ್, ಕೋಶಾಧಿಕಾರಿಯಾಗಿ ಹಾಜಿ ಅಬ್ದುಲ್ ಹಮೀದ್ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ನೂರುದ್ದೀನ್ ಅನ್ಸಾರಿ, ಉಪಾಧ್ಯಕ್ಷರಾಗಿ ಹಾಜಿ ಕೆ.ಎಂ. ಅಬ್ದುಲ್ಲ, ಹಾಜಿ ಯು.ಎಂ. ಮುಹಮ್ಮದ್, ಪಾರೆ ಅಬ್ದುಲ್ಲ ಇಸ್ಮಾಯಿಲ್, ಜೊತೆ ಕಾರ್ಯದರ್ಶಿಯಾಗಿ ಹಾಜಿ ಡಿ.ಎಂ. ಅಬ್ದುಲ್ ನಝೀರ್, ಹಾಜಿ ಹಾರೂನ್ ಅಹ್ಸನಿ, ಸದಸ್ಯ ರಾಗಿ ಹಾಜಿ ಬಿ.ಜಿ. ಹನೀಫ್, ಹಾಜಿ ವೈ. ಅಬ್ದುಲ್ಲ, ಹಾಜಿ ಎಂ.ಮುಸ್ತಫ, ಹಾಜಿ ಕೆ.ಎಂ. ಅಬ್ದುಲ್ ಸತ್ತಾರ್, ಹಾಜಿ ಕೆ.ಎಂ. ಅಬ್ದುಲ್ ರಹೀಂ, ಹಾಜಿ ಅಬ್ದುಲ್ ಸಮದ್ ಕೆ.ಎಂ., ಮುಹಮ್ಮದ್ ಶಾಫಿ ಮುಕ್ತಾರ್, ಇರ್ಫಾನ್ ಯು.ಎಸ್., ಹಾಜಿ ಪಿ.ಎಸ್. ಇಬ್ರಾಹೀಂ ಬಾವ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.