NRI ಪ್ರವಾಸಿಗಳ್ ಕಲ್ಲೇಗ: ವಾರ್ಷಿಕ ಮಹಾಸಭೆ; ನೂತನ ಸಮಿತಿ ರಚನೆ
ಇಬ್ರಾಹಿಂ ಭಾತಿಷ ಕಬಕ
ಮಂಗಳೂರು: NRI ಪ್ರವಾಸಿಗಳ್ ಕಲ್ಲೇಗ ಜಮಾಅತ್ ಇದರ ವಾರ್ಷಿಕ ಮಹಾಸಭೆ ನಡೆಯಿತು. ಕಲ್ಲೇಗ ಮಸೀದಿಯ ಖತೀಬರಾದ ಹಸನ್ ಹರ್ಷದಿ ದುಆ ನೆರವೇರಿಸಿದರು.
ಸಭೆಯ ಅಧ್ಯಕ್ಷತೆಯನ್ನು ಮಮ್ಮುಚ್ಚ ಬೊಳ್ವಾರ್ ವಹಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಬಕ ರವರು ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಬಾತಿಸ್ ಕಬಕ ರವರು ಲೆಕ್ಕಪತ್ರ ವನ್ನು ಮಂಡನೆ ಮಾಡಿದರು. ಬಳಿಕ ನೂತನ ಸಮಿತಿ ರಚನೆ ಮಾಡಲಾಯಿತು.
ಅಧ್ಯಕ್ಷರಾಗಿ ಇಬ್ರಾಹಿಂ ಬಾತಿಶ್ ಕಬಕ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಕಲೆಂಬಿ, ಕೋಶಾಧಿಕಾರಿ ಅಕ್ಕೀ (ರಫೀಕ್ ಮುರ), ಉಪಾಧ್ಯಕ್ಷರುಗಳಾಗಿ ಅಶ್ರಫ್ ಬಿ. ಎಮ್ ಬೊಳ್ವಾರ್ ಮತ್ತು ಮುಸ್ತಫಾ ಬೊಳ್ವಾರ್, ಜೊತೆ ಕಾರ್ಯದರ್ಶಿಯಾಗಿ ರಶೀದ್ ಕಂಬಳ ಬೆಟ್ಟು , ಮತ್ತು ರಝಾಕ್ ಕಬಕ, ಸಂಘಟನಾ ಕಾರ್ಯ ದರ್ಶಿ ಅಬ್ದುಲ್ ಹಮೀದ್ ಕಬಕ ಆಯ್ಕೆಯಾದರು.
*ಕಾರ್ಯಕಾರಿ ಸಮಿತಿಯ ಸದಸ್ಯರಾಗಿಅದ್ದು ಪೊಳ್ಯ, ಅಝರ್ ಮುರ , ಅನ್ಸಾರ್ ಮುರ , ಶಾಫಿ ಮಂಜಲ್ಪಡ್ಪು , ಇಬ್ರಾಹಿಂ ಕಲ್ಲೇಗ , ಮೊಹಮ್ಮದ್ ಅಶ್ರಫ್ ಮುರ , ಮುಸ್ತಫಾ ಬೊಳ್ವಾರ್ , ಝುಬೈರ್ ಮುರ ಇವರನ್ನು ಆಯ್ಕೆ ಮಾಡಲಾಯಿತು.
ಸಲಹೆ ಸಮಿತಿ ಸದಸ್ಯರಾಗಿ ಸುಲೈಮಾನ್ ಉಸ್ತಾದ್ , ಶಕೂರ್ ಹಾಜಿ , ಬಸೀರ್ ಹಾಜಿ , ಲತೀಫ್ ಹಾಜಿ , ಮಮ್ಮುಚ್ಚ ಬೊಳ್ವಾರ್ , ಹನೀಫ್ ಹಾಜಿ ಉದಯ , ಪಾರೂಕ್ ಮುರ , ಸಮದ್ ಕಲ್ಲೇಗ , ಮೊಹಿದುಚ್ಚ ಬೊಳ್ವಾರ್ , ಸಿದ್ದೀಕ್ ಕಲ್ಲೇಗ. ಇವರನ್ನು ಆಯ್ಕೆ ಮಾಡಲಾಯಿತು. ಇಕ್ಬಾಲ್ ನಗರ ವಂದಿಸಿದರು. ಕಾರ್ಯ ಕ್ರಮವನ್ನು ಹಮೀದ್ ಕಬಕ ರವರು ನಿರೂಪಿಸಿದರು.
ಸುಲೈಮಾನ್ ಉಸ್ತಾದರು ಕಿರಾಆತ್ ಪಾರಾಯಣ ಮಾಡಿದರು.