×
Ad

ಸುರತ್ಕಲ್‌: ಬಸ್‌ ನಿಲ್ದಾಣದ ದಿಂಡಿಗೆ ಸ್ಕೂಟರ್‌ ಢಿಕ್ಕಿ; ಓರ್ವ ಮೃತ್ಯು

Update: 2023-10-25 22:41 IST

ಸುರತ್ಕಲ್‌, ಅ.25: ಚಿತ್ರಾಪುರ ಬಸ್‌ ನಿಲ್ದಾಣದ ದಿಂಡಿಗೆ ಸ್ಕೂಟರ್‌ ಢಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ವರದಿಯಾಗಿದೆ.

ಮೃತಪಟ್ಟವರನ್ನು ವೆಂಕಟೇಶ್ ಎಂದು ಗುರುತಿಸಲಾಗಿದೆ. ಘಟನೆಗೆ ಸ್ಕೂಟರ್‌ ಸವಾರನ ನಿರ್ಲಕ್ಷ್ಯತನ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣ ಎಂದು ಪೊಲೀಸರು ಮಾಹಿತಿ ನಿಡಿದ್ದಾರೆ.

ವೆಂಕಟೇಶ್‌ ಅವರು ಮಂಗಳೂರಿನ ದಸರಾಕ್ಕೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಸ್ಕೂಟರ್‌ ಚಿತ್ರಾಪುರ ಬಸ್ ನಿಲ್ದಾಣ ಕಟ್ಟಡದ ಚರಂಡಿಯ ದಿಂಡಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಅವರು ಚರಂಡಿಗೆ ಎಸೆಯಲ್ಪಟ್ಟು ಹಣೆ ಮತ್ತು ಕಣ್ಣಿನ ಬದಿಗೆ ಗಾಯಗಳಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಮಂಗಳೂರು ಉತ್ತರ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News