×
Ad

ಉಪ್ಪಿನಂಗಡಿ: ರಸ್ತೆಯಲ್ಲಿ ನಡೆದುಕೊಡು ಹೋಗುತ್ತಿದ್ದ ದಂಪತಿಗೆ ತಂಡದಿಂದ ಹಲ್ಲೆ

Update: 2023-11-02 23:03 IST

ಉಪ್ಪಿನಂಗಡಿ: ಪಡೆದುಕೊಂಡ ಹಣವನ್ನು ಹಿಂದಿರುಗಿಸಲು ವಿಳಂಬಿಸಿದ್ದಾರೆಂದು ರಸ್ತೆಯಲ್ಲಿ ಪತಿಯೊಂದಿಗೆ ನಡೆದುಕೊಡು ಹೋಗುತ್ತಿದ್ದ ಬಜತ್ತೂರು ಗ್ರಾಮದ ಮಹಿಳೆ ಮತ್ತಾಕೆಯ ಪತಿಯ ಮೇಲೆ ತಂಡವೊಂದು ಹಲ್ಲೆ ಮಾಡಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.

ಬಜತ್ತೂರು ಗ್ರಾಮದ ಮಣಿಕ್ಕಳ ಮನೆ ನಿವಾಸಿ ಉಷಾ (30) ಮತ್ತಾಕೆಯ ಗಂಡ ಕೃಷ್ಣಪ್ಪ ಎಂಬವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸುರೇಶ, ಉಮೇಶ, ಗಿರೀಶ, ಇನ್ನೋರ್ವ ಗುಂಪುಗೂಡಿ ಬಂದು ಉಷಾ ಅವರ ಮೈ ಮೇಲೆ ಕೈ ಮಾಡಿ ಮಾನಭಂಗಕ್ಕೆ ಯತ್ನಿಸಿದ್ದಲ್ಲದೆ, ಅವರ ಮೇಲೆ ದೊಣ್ಣೆಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ. ರಕ್ಷಿಸಲು ಬಂದ ಅವರ ಪತಿ ಕೃಷ್ಣಪ್ಪರ ಮೇಲೂ ಕೋಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ.

ಹಲ್ಲೆಯಿಂದ ಗಾಯಗೊಂಡ ದಂಪತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News