×
Ad

ವಿಟ್ಲ: ಅನಂತಾಡಿ ಗ್ರಾ.ಪಂ. ಅಧ್ಯಕ್ಷರಿಗೆ ಸತೀಶ್ ಪೂಜಾರಿ ಮತ್ತು ತಂಡದಿಂದ ಹಲ್ಲೆ; ಪ್ರಕರಣ ದಾಖಲು

Update: 2023-07-25 23:01 IST

ವಿಟ್ಲ: ರಸ್ತೆಯ ಚರಂಡಿ ಶುಚೀಕರಣದ ಸಂದರ್ಭ ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಣೇಶ್ ಪೂಜಾರಿಯವರ ಮೇಲೆ ಸತೀಶ್ ಪೂಜಾರಿ ಬಾಕಿಲ ಮತ್ತು ತಂಡ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಗಾಯಾಳು ಗಣೇಶ್ ಪೂಜಾರಿ ಅವರು  ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗಣೇಶ ಪೂಜಾರಿ ಅವರು ಮಳೆ ನೀರು ಹೋಗಲು ಗುತ್ತಿಗೆದಾರರಿಗೆ ಸ್ಥಳ ತೋರಿಸುವಾಗ ಆರೋಪಿ ಸತೀಶ ಪೂಜಾರಿ ಎಂಬಾತ ಬಂದು ನನ್ನ ಮನೆ ಮುಂದೆ ಜಾಗ ತೋರಿಸಲಿಕ್ಕೆ ನೀನು ಯಾರು ಎಂದು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News