×
Ad

“ನನ್ನ ತಂದೆಯ ಹೆಸರನ್ನು ಜನರ ಮನಸ್ಸಿನಿಂದ ಅಳಿಸಲು ಸಾಧ್ಯವಿಲ್ಲ”: ಬಿಜೆಪಿ ನಾಯಕನಿಗೆ ನಟ ರಿತೇಶ್ ದೇಶಮುಖ್ ತಿರುಗೇಟು

ಮಾಜಿ ಸಿಎಂ ವಿಲಾಸ್ ರಾವ್ ದೇಶಮುಖ್ ಅವರ ನೆನಪುಗಳು ಅಳಿಸಿ ಹೋಗಲಿದೆ ಎಂದಿದ್ದ ರವೀಂದ್ರ ಚವಾಣ್

Update: 2026-01-06 15:14 IST

ರಿತೇಶ್ ದೇಶಮುಖ್ (Photo: PTI)

ಲಾತೂರ್: ಮಾಜಿ ಮುಖ್ಯಮಂತ್ರಿ ದಿವಂಗತ ವಿಲಾಸ್‌ರಾವ್‌ ದೇಶಮುಖ್ ಅವರ ನೆನಪುಗಳನ್ನು ಅವರ ಹುಟ್ಟೂರು ಲಾತೂರ್‌ನಿಂದ ಅಳಿಸಿಹಾಕಲಾಗುವುದು ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ರವೀಂದ್ರ ಚವಾಣ್ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ವಿಲಾಸ್‌ ರಾವ್‌ ದೇಶಮುಖ್ ಅವರ ಪುತ್ರ, ನಟ ರಿತೇಶ್ ದೇಶಮುಖ್, “ಕೆತ್ತಿದ್ದನ್ನು ಅಳಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಸೋಮವಾರ ಲಾತೂರ್‌ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರವೀಂದ್ರ ಚವಾಣ್, ಬಿಜೆಪಿ ಬೆಂಬಲಿಗರ ಶಕ್ತಿ ಮತ್ತು ಬದ್ಧತೆಯು ಈ ಪ್ರದೇಶದಲ್ಲಿ ಪಕ್ಷದ ಸಂಭಾವ್ಯ ಗೆಲುವಿನ ಸೂಚನೆಯಾಗಿದೆ. ಮಾಜಿ ಮುಖ್ಯಮಂತ್ರಿ ವಿಲಾಸ್‌ರಾವ್‌ ದೇಶಮುಖ್ ಅವರ ಪ್ರಭಾವ ಮತ್ತು ಪರಂಪರೆ ಇನ್ನು ಮುಂದೆ ನಗರದಲ್ಲಿ ಇರುವುದಿಲ್ಲ ಎಂದು ಹೇಳಿದ್ದರು.

"ಎಲ್ಲರೂ, ನಿಮ್ಮ ಕೈಗಳನ್ನು ಎತ್ತಿ ಭಾರತ್ ಮಾತಾ ಕಿ ಜೈ ಎಂದು ಹೇಳಿ, ನಿಜವಾದ ಅರ್ಥದಲ್ಲಿ, ನಿಮ್ಮ ಉತ್ಸಾಹವನ್ನು ನೋಡಿದರೆ, ವಿಲಾಸ್ ರಾವ್ ದೇಶಮುಖ್ ಅವರ ನೆನಪುಗಳು ಈ ನಗರದಿಂದ ಅಳಿಸಿ ಹೋಗುತ್ತದೆ ಎಂಬುದು ನೂರಕ್ಕೆ ನೂರು ಸತ್ಯ ಎಂಬುದನ್ನು ಗಮನಿಸಬಹುದು ಮತ್ತು ಅದರಲ್ಲಿ ಯಾವುದೇ ಸಂದೇಹವಿಲ್ಲ" ಎಂದು ಹೇಳಿದ್ದಾರೆ.

ಈ ಕುರಿತು ವೀಡಿಯೊ ಹೇಳಿಕೆ ಬಿಡುಗಡೆ ಮಾಡಿದ ನಟ ರಿತೇಶ್ ದೇಶಮುಖ್, "ಜನರಿಗಾಗಿ ಬದುಕಿದವರ ಹೆಸರುಗಳು ಅವರ ಮನಸ್ಸಿನಲ್ಲಿ ಕೆತ್ತಲ್ಪಟ್ಟಿವೆ. ಬರೆದಿರುವುದನ್ನು ಅಳಿಸಬಹುದು, ಆದರೆ ಕೆತ್ತಿರುವುದನ್ನು ಅಳಿಸಲು ಸಾಧ್ಯವಿಲ್ಲ. ಇದನ್ನು ನಾನು ಕೈಮುಗಿದು ಹೇಳುತ್ತೇನೆ" ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News