ಸಿಜೆಐ ಗವಾಯಿ ಮೇಲೆ ಶೂ ಎಸೆದ ವಕೀಲನ ಬಿಡುಗಡೆ
“ಶೂಗಳನ್ನು ಹಿಂತಿರುಗಿಸಿ”: ದಿಲ್ಲಿ ಪೊಲೀಸರ ಸೂಚನೆ
Update: 2025-10-06 20:58 IST
ಸಿಜೆಐ ಗವಾಯಿ | Photo Credit : PTI
ಹೊಸದಿಲ್ಲಿ: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಗವಾಯಿ ಅವರ ಮೇಲೆ ಶೂ ಎಸೆದ ಪ್ರಕರಣದಲ್ಲಿ ಬಂಧಿತನಾಗಿದ್ದ ವಕೀಲ ಕಿಶೋರ್ ನನ್ನು ದಿಲ್ಲಿ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ, ಆರೋಪಿಗೆ ತನ್ನ ಶೂಗಳನ್ನು ಹಿಂತಿರುಗಿಸಿಕೊಳ್ಳುವಂತೆ ಸೂಚಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಕಿಶೋರ್ ಅವರು ಮಯೂರ್ ವಿಹಾರ್ ನಿವಾಸಿಯಾಗಿದ್ದು, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ನ ಸೇಲ್ ನೋಂದಾಯಿತ ಸದಸ್ಯನಾಗಿದ್ದಾನೆ. ಬಂಧನದ ವೇಳೆ ಆತನ ಬಳಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್, ಶಹದಾರ ಬಾರ್ ಅಸೋಸಿಯೇಷನ್ ಹಾಗೂ ದಿಲ್ಲಿ ಬಾರ್ ಕೌನ್ಸಿಲ್ನ ಸದಸ್ಯತ್ವದ ಕಾರ್ಡ್ ಗಳು ಪತ್ತೆಯಾಗಿವೆ.
ಸಿಜೆಐ ಗವಾಯಿ ಅವರಿಗೆ ದಿಲ್ಲಿ ಪೊಲೀಸಿನ ಭದ್ರತಾ ವಿಭಾಗದಿಂದ ಈಗಾಗಲೇ Z ಪ್ಲಸ್ ಭದ್ರತೆ ಒದಗಿಸಲಾಗಿದೆ.