ನನ್ನನ್ನು ಮೈದಾನದಿಂದ ಹೊರ ದೂಡುತ್ತೀರಾ ? ನಿವೃತ್ತಿ ಪ್ರಶ್ನೆ ಕೇಳಿದವರಿಗೆ ಧೋನಿ ತಿರುಗೇಟು

Update: 2016-02-13 07:04 GMT

ರಾಂಚಿ: ಭಾರತೀಯ ಟಿ20 ಮತ್ತು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಇಂದು ಟಿ-20 ಪಾರ್ಮೆಟ್‌ನಿಂದ ನಿವೃತ್ತರಾಗಬೇಕೆಂಬ ಕೂಗಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕೊನೆಗೂ ನನ್ನನ್ನು ಬಲವಂತವಾಗಿ ಆಟದಿಂದ ಹೊರದಬ್ಬಲು ಬಯಸುವಿರಾ? ಎಂದು ಅವರು ಮರು ಪ್ರಶ್ನೆ ಹಾಕಿ ಮಾಧ್ಯಮದ ಮಂದಿಯನ್ನು ಚಕಿತಗೊಳಿಸಿದ್ದಾರೆ.

   ಭಾರತ ಶೀಲಂಕವನ್ನು ಸರಣಿಯ ಎರಡನೆ ಟಿ20 ಪಂದ್ಯದಲ್ಲಿ 69 ರನ್‌ಗಳ ಭಾರೀ ಅಂತರದಿಂದ ಸೋಲಿಸಿದ್ದು ಸರಣಿ 1-1 ಅಂತರದಲ್ಲಿ ಸಮಬಲಗೊಂಡ ನಂತರ ಮಾಧ್ಯಮಗಳೊಂದಿಗೆ ಮಾತಾಡಿ ಈ ರೀತಿ ಪ್ರಶ್ನಿಸಿದ್ದಾರೆ. ಇದು ನಿಮ್ಮ ಮನೆ ಅಂಗಣದಲ್ಲಿ ಕೊನೆಯ ಟಿ20ಪಂದ್ಯವೇ ಎಂದು ಧೋನಿಯನ್ನು ಪ್ರಶ್ನಿಸಲಾಗಿತ್ತು. ಕೂಡಲೇ ಮರು ಪ್ರಶ್ನೆ ಹಾಕಿದ ಧೋನಿ ನೀವೇಕೆ ಇಷ್ಟು ಬೇಗ ನನ್ನನ್ನು ಆಟದಂಗಳದಿಂದ ಹೊರದೂಡಲು ಬಯಸುತ್ತೀರಿ ಎಂದು ಕೇಳಿದರು. ಈ ಫಾರ್ಮೆಟ್‌ನಲ್ಲಿ ಉತ್ತಮವಾಗಿ ಆಡುತ್ತಿರುವಾಗ ಯಾಕೆ ಪ್ರಶ್ನೆ ಕೇಳಲಾಗುತ್ತಿದೆ. ಎಂದು ನನಗೆ ಅರ್ಥವಾಗುತ್ತಿಲ್ಲ. ಕೂಡಲೇ ಕ್ರಿಕೆಟ್ ಆಡದಂತೆ ಮಾಡಲು ಕೆಲವು ಜನರು ಯಾಕೆ ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ಆಶ್ಚರ್ಯವನ್ನು ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News