ಮಾರಕಾಸ್ತ್ರಗಳಿಂದ ಹಲ್ಲೆ 21.41 ಲಕ್ಷ ರೂ. ಲೂಟಿ
Update: 2016-03-19 18:23 GMT
ಬೆಂಗಳೂರು, ಮಾ. 19: ಪೆಟ್ರೋಲ್ ಬಂಕ್ನಿಂದ ಬ್ಯಾಂಕ್ಗೆ ಹಣ ಕಟ್ಟಲು ಹೋಗುವ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ 21.41 ಲಕ್ಷ ರೂ. ಇದ್ದ್ದ ಚೀಲ ದೋಚಿ ಪರಾರಿಯಾಗಿರುವ ಘಟನೆ ಇಲ್ಲಿನ ತುಮಕೂರು ರಸ್ತೆ ಬಳಿಯ ಜಿಂದಾಲ್ ಬಳಿ ನಡೆದಿದೆ.
ಇಂದು ಬೆಳಗ್ಗೆ 10.30ರ ವೇಳೆಯಲ್ಲಿ ಜಿಂದಾಲ್ ಎಲಿವೇಟೆಡ್ ಮೇಲು ಸೇತುವೆ ಬಳಿ ಗಟ್ಟಿ ಪೆಟ್ರೋಲ್ ಬ್ಯಾಂಕ್ನಿಂದ ವೆಂಕಟರಮಣ ಹಾಗೂ ನಾಗಪ್ಪ ಎಂಬವರು ಹಣವನ್ನು ಚೀಲದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಪರಿಣಾಮ ಕ್ಯಾಷಿಯರ್ ವೆಂಕಟರಮಣ ಎಂಬವರ ಕೈ ಬೆರಳು ತುಂಡಾಗಿದೆ ಎಂದು ಹೇಳಲಾಗಿದ್ದು, ಈ ಸಂಬಂಧ ಇಲ್ಲಿನ ಮಾದನಾಯ್ಕನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.