×
Ad

ಗೋಪಾಲ ಕೃಷ್ಣ ಮೆಲಾಂಟ

Update: 2016-03-24 14:53 IST

 ಬಂಟ್ವಾಳ, ಮಾ.24: ಬಿ.ಸಿ.ರೋಡ್ ಸೇರಿದಂತೆ ರಾಜ್ಯದ ವಿವಿಧ ಟೋಲ್ ಗೇಟ್ ಗುತ್ತಿಗೆದಾರ ಮಂಗಳೂರು ನಿವಾಸಿ ಗೋಪಾಲ ಕೃಷ್ಣ ಮೆಲಾಂಟ (68) ಹೃದಯಾಘಾತದಿಂದ ಇಂದು ನಿಧನರಾದರು. ಅವರು ಮಂಗಳೂರು ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿದ್ದರು.
 ಬ್ರಹ್ಮರಕೊಟ್ಲು, ಸುರತ್ಕಲ್ ಟೋಲ್ ಗೇಟ್ ಗುತ್ತಿಗೆದಾರ ಗೋಪಾಲ ಕೃಷ್ಣ ಮೆಲಾಂಟ ಉದ್ಯಮಿಯಾಗಿದ್ದರು.


  ಅವರು, ಸಾಮಾಜಿಕ, ಧಾರ್ಮಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ಉಪ್ಪಿನಂಗಡಿ ಮುಗರೋಡಿ ನಿವಾಸಿಯಾಗಿದ್ದ ಅವರು ಮಂಗಳೂರಿನ ನಂತೂರಿ ನಲ್ಲಿ ವಾಸವಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News