ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ
Update: 2016-04-14 23:48 IST
ಉಡುಪಿ, ಎ.14: ತಲ್ಲೂರು ದಿ. ಅಣ್ಣಯ್ಯ ಶೆಟ್ಟಿಯವರ ಧರ್ಮಪತ್ನಿ ಕನಕಾ ಅಣ್ಣಯ್ಯ ಶೆಟ್ಟಿ (95) ಅನಾರೋಗ್ಯದಿಂದ ಎ.14ರಂದು ಬೈಲೂರಿನಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು.
ಉಡುಪಿಯ ಉದ್ಯಮಿ, ರಂಗಭೂಮಿ ಉಡುಪಿ ಹಾಗೂ ಉಡುಪಿ ಜಿಲ್ಲಾ ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸೇರಿದಂತೆ ಐವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.