ಮೇ 10ರಂದು ‘ಆರ್ಯ ಪ್ರಶಸ್ತಿ’ ಪ್ರದಾನ

Update: 2016-05-03 18:26 GMT

ಬೆಂಗಳೂರು, ಮೇ 3: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ದಲಿತ ಸೇವಾ ಸಮಿತಿ ವತಿಯಿಂದ ಮೇ.10ರಂದು ನಗರದ ಪುರಭವನದಲ್ಲಿ ‘ಆರ್ಯ ಪ್ರಶಸ್ತಿ’ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ.

ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ರಾಜ್ಯದ ನಾಡು, ನುಡಿಯ ಸೇವೆಗಾಗಿ ಶ್ರಮಿಸಿದ ಗಣ್ಯರಿಗೆ ಪ್ರಶಸ್ತಿ ನೀಡಲಾಗುವುದು. ಆರ್ಹ ಅಭ್ಯರ್ಥಿಗಳು ಮೇ.10ರೊಳಗೆ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.8970863478 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News