ದೇವರಾಜ ಅರಸು ಅವರ ಜನ್ಮದಿನಾಚರಣೆಗೆ ಅರಸು ಬಳಸುತ್ತಿದ್ದ ಕಾರಿನಲ್ಲೇ ಆಗಮಿಸಿದ ಸಿಎಂ

Update: 2016-08-20 07:04 GMT

ಬೆಂಗಳೂರು, ಆ.20: ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ 101ನೆ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಉಪಯೋಗಿಸುತ್ತಿದ್ದ ಬೆಂಝ್ 58 ಕಾರಿನಲ್ಲಿ ವಿಧಾನಸೌಧಕ್ಕೆ ಆಗಮಿಸಿ ಗಮನ ಸೆಳೆದರು.

ಅರಸು ಉಪಯೋಗಿಸುತ್ತಿದ್ದ ಬೆಂಝ್ 58 ಕಾರಿನಲ್ಲಿ ಆಗಮಿಸಿದ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿರುವ ಅರಸು ಅವರ ಪುತ್ಥಳಿಗೆ ಮಾಲಾರ್ಪಣೆಗೈದರು. ಮಾಲಾರ್ಪಣೆ ಬಳಿಕ ಅದೇ ಕಾರಿನಲ್ಲಿ ಅರಸು ಮುಖ್ಯಮಂತ್ರಿ ಆಗಿದ್ದಾಗ ಕಾರಿನಲ್ಲಿ ಬಂದು ಇಳಿಯುತ್ತಿದ್ದ ಪಶ್ಚಿಮ ದ್ವಾರದ ಮುಂಭಾಗದ ಮೆಟ್ಟಿಲುಗಳವರೆಗೆ ಪ್ರಯಾಣಿಸಿ ಬಳಿಕ ಕಚೇರಿಗೆ ತೆರಳಿದರು.

ಈ ಸಂದರ್ಭ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಡಿ. ದೇವರಾಜು ಅರಸು ಅವರ ಆಡಳಿತದ ಅವಧಿ ಪರಿರ್ವತನಾ ಪರ್ವವೇ ಆಗಿತ್ತು. ದಲಿತ, ಹಿಂದುಳಿದ ವರ್ಗ ಹಾಗೂ ಶೋಷಿತ ವರ್ಗದವರ ಅಭಿವೃದ್ಧಿಗೆ ಅರಸು ಶ್ರಮಿಸಿದ್ದಾರೆ. ಅರಸು ಅವರು ಸಮ ಸಮಾಜದ ಹರಿಕಾರ. ಎಲ್ಲ ವರ್ಗದ ಅಭಿವೃದ್ಧಿಗೆ ಶ್ರಮಿಸಿದ ಅಪರೂಪದ ವ್ಯಕ್ತಿ. ಶೋಷಣೆ ರಹಿತ ಸಮ ಸಮಾಜ ನಿರ್ಮಾಣ ಅರಸು ಆಶಯವಾಗಿತ್ತು. ಅವರ ಆಶಯದಂತೆ ರಾಜ್ಯ ಸರಕಾರ ಹಲವು ಜನಪರ ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು.

ಅರಸು ಅವರ ಹುಟ್ಟೂರಿನಲ್ಲಿ ತೋಟದ ಮನೆಗೆ ಬೀಗ ಹಾಕಿರುವ ವಿಚಾರ ನನನೆ ತಿಳಿದಿಲ್ಲ ಎಂದು ಸಿಎಂ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News