ಅಬ್ದುಲ್ ಖಾದರ್

Update: 2016-09-17 18:16 GMT

ಮೂಡುಬಿದಿರೆ,ಸೆ.17:ಹಿರಿಯ ಜಾನುವಾರು ವ್ಯಾಪಾರಿ ಕರಿಂಜೆ ಗ್ರಾಮದ ಗಂಟಾಲ್‌ಕಟ್ಟೆಯ ಅಬ್ದುಲ್ ಖಾದರ್(73)ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ನಿಧನರಾದರು.
ಮೂಡುಬಿದಿರೆ ಪರಿಸರದಲ್ಲಿ ಕೃಷಿಕರಿಗೆ ಉಳುಮೆಯ ಎತ್ತು ಹಾಗೂ ಕೋಣಗಳ ವ್ಯಾಪಾರ ಮಾಡುವ ಮೂಲಕ ಅವರು ಜನಪ್ರಿಯರಾಗಿದ್ದರು. ಬಳ್ಳಾರಿ, ಹೊಸಪೇಟೆ, ಹಾಸನ, ಚಿಕ್ಕಮಗಳೂರು ಮುಂತಾದ ಕಡೆಗಳಿಂದ ಅವರು ಉಳುಮೆಯ ಎತ್ತು ಹಾಗೂ ಕೋಣಗಳನ್ನು ತಂದು ಬೆಳುವಾಯಿ ಮತ್ತು ಗಂಟಾಲ್‌ಕಟ್ಟೆಯನ್ನು ಕೆಂದ್ರವಾಗಿರಿಸಿಕೊಂಡು ರೈತರಿಗೆ ಮಾರಾಟ ಮಾಡುತ್ತಿದ್ದರು. ಪ್ರಾಮಾಣಿಕ ಜಾನುವಾರು ವ್ಯಾಪಾರಿಯೆಂದೆ ಅವರು ಊರಲ್ಲಿ ಪರಿಚಿತರಾಗಿದ್ದರು. ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿಯು ಸೇವೆ ಸಲ್ಲಿಸಿದ್ದರು. ಅವರಿಗೆ ಪತ್ನಿ ಐವರು ಗಂಡು ಮತ್ತು ಐವರು ಹೆಣ್ಣುಮಕ್ಕಳಿದ್ದಾರೆ. ಅವರ ಕಲ್ಲಬೆಟ್ಟು ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ