ಗುಜರಾತ್ ಹತ್ಯಾಕಾಂಡ ಆರೋಪಿ ಲಂಡನ್‌ನಲ್ಲಿ ಸೆರೆ

Update: 2016-10-12 07:18 GMT

ಅಹ್ಮದಾಬಾದ್, ಅಕ್ಟೋಬರ್ 12: ಗುಜರಾತ್ ಹತ್ಯಾಕಾಂಡ ಪ್ರಕರಣವೊಂದರ ಆರೋಪಿಗಳಲ್ಲಿ ಓರ್ವನನ್ನು ಲಂಡನ್‌ನಲ್ಲಿ ಬಂಧಿಸಲಾಗಿದೆಎಂದು ಗುಜರಾತ್ ಪೊಲೀಸರು ತಿಳಿಸಿದ್ದಾರೆಂದು ವರದಿಯಾಗಿದೆ. ಗುಜರಾತ್ ಆನಂದ್ ಜಿಲ್ಲೆಯ ಒದಿ ಗ್ರಾಮದಲ್ಲಿ ನಡೆದಿದ್ದ ದಾಳಿಯಲ್ಲಿ ಪಾಲ್ಗೊಂಡಿದ್ದ ಸಮೀರ್ ಪಟೇಲ್‌ನನ್ನು ಲಂಡನ್ ಪೊಲೀಸರು ಬಂಧಿಸಿದ್ದು, ಈತನ ವಿರುದ್ಧ ರೆಡ್‌ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು.

ಈತನನ್ನು ಈವಾರದಲ್ಲಿ ಊರಿಗೆ ಕರೆತರಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 2002 ಮಾರ್ಚ್ ಒಂದರಂದು ಒಂಬತ್ತು ಮಹಿಳೆಯರು, ಮಕ್ಕಳು ಮತ್ತು ಐವರು ಪುರುಷರಿದ್ದ ಮುಸ್ಲಿಮರ ತಂಡವನ್ನು ಜೀವಂತವಾಗಿ ಸುಟ್ಟುಹಾಕಿದ ಪ್ರಕರಣದಲ್ಲಿ ಸಮೀರ್ ಪಟೇಲ್ ಆರೋಪಿಯಾಗಿದ್ದಾನೆ. ವಿಚಾರಣೆ ಪೂರ್ತಿಯಾಗುವ ಮೊದಲೇಜಾಮೀನಲ್ಲಿ ಹೊರಬಂದಿದ್ದ ಆತ ನಂತರ ತಪ್ಪಿಸಿಕೊಂಡಿದ್ದ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News