ಕೊಲ್ಲಾಪುರದಲ್ಲಿ ಮರಾಠರಿಂದ ಬೃಹತ್ ಮೌನ ಮೆರವಣಿಗೆ

Update: 2016-10-15 17:19 GMT

ಕೊಲ್ಲಾಪುರ,ಅ.15: ಮೀಸಲಾತಿ ಸೇರಿದಂತೆ ತಮ್ಮ ಬೇಡಿಕೆಗಳನ್ನು ಬೆಂಬಲಿಸಿ ಮರಾಠಾ ಸಮುದಾಯದ ಸದಸ್ಯರು ಇಂದಿಲ್ಲಿ ಬೃಹತ್ ಮೌನ ಮೆರವಣಿಗೆಯನ್ನು ನಡೆಸಿದರು.

 
‘ಮರಾಠಾ ಕ್ರಾಂತಿ ಮೂಕ ಮೋರ್ಚಾ’ದಲ್ಲಿ ಮರಾಠಾ ಸಮುದಾಯದ ಸಾವಿರಾರು ಜನರೊಂದಿಗೆ ಸಾಮಾಜಿಕ-ಧಾರ್ಮಿಕ ಹಾಗೂ ರಾಜಕೀಯ ಗುಂಪುಗಳೂ ಭಾಗವಹಿಸಿದ್ದವು. ಮಹಾರಾಷ್ಟ್ರದ ಕಂದಾಯ ಸಚಿವ ಚಂದ್ರಕಾಂತ ಪಾಟೀಲ್ ಅವರು ಮರಾಠಾ ಸಮುದಾಯದೊಂದಿಗೆ ಏಕತೆಯನ್ನು ವ್ಯಕ್ತಪಡಿಸಿದರಲ್ಲದೆ, ಮೆರವಣಿಗೆಯಲ್ಲಿ ಕೊಂಚ ದೂರವನ್ನೂ ಸಾಗಿದರು. ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಿದ್ದು ಮೆರವಣಿಗೆಯ ವಿಶೇಷವಾಗಿತ್ತು.
 ಮರಾಠಾ ಸಮುದಾಯವು ತನ್ನ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಎರಡು ವಾರಗಳಿಂದಲೂ ರಾಜ್ಯದ ವಿವಿಧೆಡೆಗಳಲ್ಲಿ ಇಂತಹ ಮೌನ ಮೆರವಣಿಗೆಗಳನ್ನು ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News