ಬೆಂಗಳೂರಿನ ಆರ್ಚ್‌ಬಿಷಪ್ ರೆ.ಡಾ. ಬರ್ನಾರ್ಡ್ ಮೊರಸ್ ಅವರ ಅಭಿನಂದನೆ ಹಾಗೂ ಸಂದೇಶ

Update: 2016-10-20 04:59 GMT

ವಸ್ತುನಿಷ್ಠ ಪತ್ರಿಕೋದ್ಯಮದಲ್ಲಿ ಯಶಸ್ವಿಯಾಗಿ 14ನೆ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ‘ವಾರ್ತಾಭಾರತಿ’ ದೈನಿಕದ ಸಂಪಾದಕರು ಹಾಗೂ ಇಡೀ ಬಳಗಕ್ಕೆ ನನ್ನ ಹಾರ್ದಿಕ ಅಭಿನಂದನೆಗಳು ಹಾಗೂ ಆಶೀರ್ವಾದಗಳು.

‘‘ಮಾಧ್ಯಮವೊಂದು ಅಧಿಕಾರದ ಮುಂದೆ ಸತ್ಯವನ್ನು ಹೇಳಲು ಶಕ್ತವಾದಲ್ಲಿ ಹಾಗೂ ಜನಸಾಮಾನ್ಯರ ಭಾವನೆಗಳು, ಆಶೋತ್ತರಗಳು, ಕಾತರಗಳು ಹಾಗೂ ಆವಶ್ಯಕತೆಗಳನ್ನು ಸಂವಹನ ಮಾಡಲು ಸಮರ್ಥವಾದಲ್ಲಿ ಅದು ತನ್ನ ಉದ್ದೇಶವನ್ನು ಈಡೇರಿಸಿದಂತಾಗುತ್ತದೆ. ಅರ್ಧಸತ್ಯಗಳು ಯಾವತ್ತೂ ತುಂಬಾ ಅಪಾಯಕಾರಿ. ಮಾಧ್ಯಮವು ಯಾವುದೇ ವಿಷಯದ ಬಗ್ಗೆ ಭಯ ಅಥವಾ ಪೂರ್ವಾಗ್ರಹಗಳಿಲ್ಲದೆ ಸಂಪೂರ್ಣ ಸತ್ಯವನ್ನು ಪ್ರಕಟಿಸಲು ಶ್ರಮಿಸಿದಲ್ಲಿ, ನಾವು ಉತ್ತಮ ಅರಿವಿನಿಂದ ಕೂಡಿದ ಸಮಾಜವನ್ನು ನಿರ್ಮಿಸಬಹುದು. ಇದರಿಂದ ಆರೋಗ್ಯವಂತ ಮತ್ತು ಪ್ರಗತಿಪರ ಅಭಿವೃದ್ಧಿ ಸಾಧ್ಯವಾಗಲಿದೆ.

ವಾರ್ತಾಭಾರತಿಯು ಕಳೆದ 14 ವರ್ಷಗಳಲ್ಲಿ ಎತ್ತಿಹಿಡಿದಿರುವ ಮೌಲ್ಯಗಳನ್ನು ಹಾಗೂ ತತ್ವಗಳನ್ನು ಮುಂದುವರಿಸಿಕೊಂಡು ಹೋಗಲಿ ಎಂದು ಹಾರೈಸುತ್ತೇನೆ. ಪತ್ರಿಕೆಯ ಬಳಗಕ್ಕೆ ಮತ್ತು ಓದುಗರಿಗೆ ಸದಾ ದೇವರ ಅಪಾರ ಅನುಗ್ರಹವಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News