‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಪಟ್ಟಿ ಪ್ರಕಟ
ಬೆಂಗಳೂರು, ಅ.30: ರಾಜ್ಯೋತ್ಸವ ಸಂದರ್ಭದಲ್ಲಿ ನಾಡು-ನುಡಿ, ಕಲೆ-ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ನೀಡುವ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಗೆ ನ್ಯಾ.ಶಿವರಾಜ್ ಪಾಟೀಲ್, ವೌಲಾಸಾಬ್ ಇಮಾಮ್ ಸಾಬ್ ನದಾಫ್, ಕೆ.ಟಿ.ಗಟ್ಟಿ ಸೇರಿದಂತೆ ಒಟ್ಟು 61 ಮಂದಿಯನ್ನು ಆಯ್ಕೆ ಮಾಡಲಾಗಿದೆ.
ನ.1ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಕೇಂದ್ರ ಸಚಿವ ಅನಂತ ಕುಮಾರ್, ಮೇಯರ್ ಪದ್ಮಾವತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು 1ಲಕ್ಷ ರೂ.ನಗದು, 20 ಗ್ರಾಂ ಚಿನ್ನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.
ಸಾತಂತ್ರ ಹೋರಾಟಗಾರ ವಿಭಾಗದಲ್ಲಿ ಬೆಳಗಾವಿಯ ಮಹದೇವ್ ಶಿವಬಸವಪ್ಪ ಪಟ್ಟಣ್, ನ್ಯಾಯಾಂಗ- ನ್ಯಾ.ಶಿವರಾಜ್ಪಾಟೀಲ್, ಹೊಸನಾಡು-ಬೇಜವಾಡ ವಿಲ್ಸನ್-ಹೊಸದಿಲ್ಲಿ ಇವರು ಆಯ್ಕೆಯಾಗಿದೆ.
ಸಾಹಿತ್ಯ ವಿಭಾಗ: ರಂ.ಶಾ.ಲೋಕಾಪುರ-ಬೆಳಗಾವಿ, ಬಿ.ಶ್ಯಾಮಸುಂದರ್- ಮೈಸೂರು, ಕೆ.ಟಿ.ಗಟ್ಟಿ-ದಕ್ಷಿಣ ಕನ್ನಡ, ಡಾ.ಸುಕನ್ಯಾ ಮಾರುತಿ-ಧಾರವಾಡ ಇವರನ್ನು ಆಯ್ಕೆ ಮಾಡಲಾಗಿದೆ.
ರಂಗಭೂಮಿ: ವೌಲಾಸಾಬ್ ಇಮಾಮ್ಸಾಬ್ ನದಾಫ್(ಅಣ್ಣಿಗೇರಿ)- ದಾವಣಗೆರೆ, ಟಿ.ಎಚ್.ಹೇಮಲತಾ-ತುಮಕೂರು, ರಾಮೇಶ್ವರಿ ವರ್ಮ-ಮೈಸೂರು, ಉಮಾರಾಣಿ ಬಾರಿಗಿಡದ-ಬಾಗಲಕೋಟೆ, ಚಂದ್ರಕುಮಾರ್ ಸಿಂಗ್-ಬೆಂಗಳೂರು ಇವರು ಆಯ್ಕೆಯಾಗಿದ್ದಾರೆ.
ಸಿನಿಮಾ-ಕಿರುತೆರೆ: ರೇವತಿ ಕಲ್ಯಾಣ ಕುಮಾರ್(ನಟಿ)-ಬೆಂಗಳೂರು, ಜ್ಯೂಲಿ ಲಕ್ಷ್ಮಿ-ಚೆನ್ನೈ, ಜಿ.ಕೆ.ಶ್ರೀನಿವಾಸಮೂರ್ತಿ-ಬೆಂಗಳೂರು ಗ್ರಾಮಾಂತರ, ಸಾ.ರಾ. ಗೋವಿಂದು(ಬೆಂಗಳೂರು), ಸೈಯದ್ ಸತ್ಯಜೀತ್-ಧಾರವಾಡ ಇವರನ್ನು ಆಯ್ಕೆ ಮಾಡಲಾಗಿದೆ.
ಸಂಗೀತ-ನೃತ್ಯ: ಕೆ.ಮುರುಳೀಧರ ರಾವ್-ದಕ್ಷಿಣ ಕನ್ನಡ, ದ್ವಾರಕಿ ಕೃಷ್ಣಸ್ವಾಮಿ (ಕೊಳಲು)-ಬೆಂಗಳೂರು, ಹೈಮಾವತಮ್ಮ(ಗಮಕ)-ಬೆಂಗಳೂರು, ಪಂಡಿತ್ ನಾರಾಯಣ ಢಗೆ-ರಾಯಚೂರು, ವ್ಹಿ.ಜಿ.ಮಹಾಪುರುಷ(ಸೀತಾರ)- ಬಾಗಲ ಕೋಟೆ.
ಜಾನಪದ: ತಿಮ್ಮಮ್ಮ(ಸೋಬಾನೆ)-ಮಂಡ್ಯ, ಶಾರದಮ್ಮ(ತತ್ವಪದ)- ಚಿಕ್ಕಮಗಳೂರು, ಮಲ್ಲಯ್ಯ ಹಿಡಕಲ್(ಭಜನೆ)-ಬಾಗಲಕೋಟೆ, ಅಡಿವೆಪ್ಪ ಸಣ್ಣ ಬೀರಪ್ಪ ಕುರಿಯವರ(ಏಕತಾರಿ)-ಹಾವೇರಿ, ಸೋಭಿನಾ ಮೋತೇಶ್ ಕಾಂಬ್ರೆಕರ್ (ಡಮಾಮಿ) ಉತ್ತರ ಕನ್ನಡ, ಚಿಕ್ಕಮರಿಗೌಡ(ಪೂಜಾ ಕುಣಿತ)-ರಾಮನಗರ.
ಯಕ್ಷಗಾನ-ಬಯಲಾಟ: ಎಂ.ಆರ್.ರಂಗನಾಥ ರಾವ್(ಗೊಂಬೆ ಆಟ)- ಬೆಂಗಳೂರು ಗ್ರಾಮಾಂತರ, ಪೇತ್ರಿ ಮಾಧವ ನಾಯ್ಕಿ-ಉಡುಪಿ, ಕಿನ್ನಿಗೋಳಿ ಮುಖ್ಯ ಪ್ರಾಣ ಶೆಟ್ಟಿಗಾರ-ಉಡುಪಿ, ಸುಜಾತಮ್ಮ(ಪಾರಿಜಾತ)-ಬಳ್ಳಾರಿ, ದ್ಯಾನ್ಲೆಪ್ಪ ಜಾಂಪ್ಲೆಪ್ಪ ಲಮಾಣಿ(ದೊಡ್ಡಾಟ)-ಗದಗ.
ಸಮಾಜ ಸೇವೆ: ತುಳಸೆಮ್ಮ ಕೆರೂರು-ಗದಗ, ಜಿ.ಎಂ.ಮುನಿಯಪ್ಪ-ಕೋಲಾರ, ಸೋಮಣ್ಣ ಹೆಗ್ಗಡದೇವನಕೋಟೆ-ಚಾಮರಾಜನಗರ, ನಜೀರ್ ಅಹ್ಮದ್ ಯು. ಶೇಖ್-ಉತ್ತರ ಕನ್ನಡ.
ಸಂಕೀರ್ಣ: ಡಾ.ಎಂ.ಎಂ.ವಾಲಿ(ಜಾನಪದ ತಜ್ಞ)-ವಿಜಯಪುರ, ಆರ್. ಜೈಪ್ರಸಾದ್(ತಾಂತ್ರಿಕ ಸಲಹೆಗಾರ) ಬೆಂಗಳೂರು, ಡಾ.ಶಕುಂತಲಾ ನರಸಿಂಹನ್ (ಸಂಗೀತ ತಜ್ಞ)-ಬೆಂಗಳೂರು, ದೇವರಾಜ ರೆಡ್ಡಿ(ಅಂತರ್ಜಲ ತಜ್ಞ) ಚಿತ್ರದುರ್ಗ.
ಶಿಲ್ಪ ಕಲೆ-ಚಿತ್ರಕಲೆ: ಧೃವ ರಾಮಚಂದ್ರ ಪತ್ತಾರ್(ಶಿಲ್ಪ)-ವಿಜಯಪುರ, ಕಾಶೀನಾಥ ಶಿಲ್ಪಿ(ಶಿಲ್ಪ) ಶಿವಮೊಗ್ಗ, ಬಸವರಾಜ ಎಲ್.ಜಾನೆ(ಚಿತ್ರಕಲೆ)-ಕಲಬುರ್ಗಿ, ಪಾವರ್ತಮ್ಮ(ಕೌದಿ ಕಲೆ)ಯಾದಗಿರಿ.
ಕೃಷಿ-ಪರಿಸರ: ಎಲ್.ಸಿ.ಸೋನ್ಸ್(ಪರಿಸರ)-ದಕ್ಷಿಣ ಕನ್ನಡ, ಪ್ರೊ.ಜಿ.ಕೆ.ವೀರೇಶ್ -ಹಾಸನ, ಕೆ.ಪುಟ್ಟಣ್ಣಯ್ಯ-ಮೈಸೂರು, ಡಾ.ಎಂ.ಎ.ಖಾದ್ರಿ-ಬೀದರ್.
ಮಾಧ್ಯಮ: ಎಂ.ಎಂ.ಮಣ್ಣೂರು-ಕಲಬುರಗಿ, ಭವಾನಿ ಲಕ್ಷ್ಮಿ ನಾರಾಯಣ- ಚಿಕ್ಕಬಳ್ಳಾಪುರ, ಈಶ್ವರ ದೈತೋಟ-ಬೆಂಗಳೂರು, ಇಂದೂಧರ ಹೊನ್ನಾಪುರ- ಬೆಂಗಳೂರು.
ಸಂಘ-ಸಂಸ್ಥೆ: ಟೀಂ ಯುವ-ಬೀದರ್, ವಿಜ್ಞಾನ ಮತ್ತು ತಂತ್ರಜ್ಞಾನ: ಜೆ.ಆರ್. ಲಕ್ಷ್ಮಣ ರಾವ್-ಮೈಸೂರು, ಪ್ರೊ.ಕೆ.ಮುನಿಯಪ್ಪ-ಚಿಕ್ಕಬಳ್ಳಾಪುರ,
ವೈದ್ಯಕೀಯ ವಿಭಾಗದಲ್ಲಿ ಡಾ.ಹೆಬ್ರಿ ಸುಭಾಷ್ ಕೃಷ್ಣ ಬಲ್ಲಾಳ್-ಉಡುಪಿ, ಕ್ರೀಡಾ ವಿಭಾಗದಲ್ಲಿ ಸುರ್ಜಿತ್ ಸಿಂಗ್(ಪ್ಯಾರಾ ಒಲಂಪಿಕ್ ಕ್ರೀಡಾಪಟು)-ಬೆಂಗಳೂರು, ಎಸ್.ವಿ. ಸುನಿಲ್(ಹಾಕಿ) ಕೊಡಗು, ಕೃಷ್ಣ ಅಮೋಗೆಪ್ಪಾ ನಾಯ್ಕೋಡಿ(ಸೈಕ್ಲಿಂಗ್)- ವಿಜಯಪುರ, ಶಿಕ್ಷಣ ವಿಭಾಗದಲ್ಲಿ ತೇಜಸ್ವಿ ಕಟ್ಟಿಮನಿ-ಕೊಪ್ಪಳ ಇವರನ್ನು ಆಯ್ಕೆ ಮಾಡಲಾಗಿದೆ.