ಮಕ್ಕತುಲ್ ಮುಕರ್ರಮದಲ್ಲಿ ಕಾಜೂರ್ ತಂಙಲ್ ರವರಿಗೆ ಸನ್ಮಾನ
Update: 2016-11-26 11:38 GMT
ಮಕ್ಕಾ,ನ.26: ಕೆ.ಸಿ.ಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಮಾಸಿಕ ಸ್ವಲಾತ್ ಮಜ್ಲಿಸ್ ಜಬಲನ್ನೂರಿನ ಮೂಸಾ ಹಾಜಿ ವಸತಿಯಲ್ಲಿ ನಡೆಯಿತು. ಸ್ವಲಾತ್ ಮಜ್ಲಿಸ್ ನೇತೃತ್ವವನ್ನು ಅಸ್ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲ್ ಕಾಜೂರ್ ತಂಙಲ್ ವಹಿಸಿದ್ದು ದುಆಃ ನಡೆಸಿ ಆಶಿರ್ವಚನೆ ನೀಡಿದರು. ಕಾರ್ಯಕ್ರಮವನ್ನು ಬಹು. ಉಮರ್ ಮದನಿ ಖಾಮಿಲ್ ಸಖಾಫಿ ಪರಪ್ಪು ಉದ್ಘಾಟಿಸಿದರು. KCF ಮಕ್ಕತುಲ್ ಮುಕರ್ರಮಃ ವತಿಯಿಂದ ಕಾಜೂರ್ ತಂಙಲ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.ಬಳಿಕ
'ಕೆ.ಸಿ.ಎಫ್ ಯಾಕೆ ಬೇಕು' ಎಂಬ ವಿಷಯದ ಬಗ್ಗೆ ಬಹು. ಶಿಹಾಬುದ್ದೀನ್ ಅಶ್ರಫೀ ಖಾಮಿಲ್ ಸಖಾಫಿ ಉಳ್ಳಾಲ ಅವರು ಕಾರ್ಯಕರ್ತರಿಗೆ ಮನದಟ್ಟಾಗುವ ರೀತಿಯಲ್ಲಿ ತರಗತಿ ನಡೆಸಿದರು. ಇದೇ ವೇಳೆ ಶಿಹಾಬುದ್ದೀನ್ ಅಶ್ರಫೀ ಖಾಮಿಲ್ ಸಖಾಫಿ ಉಳ್ಳಾಲ ಅವರನ್ನು ಕೂಡ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಹನೀಫ್ ಸಖಾಫಿ ಬೊಳ್ಮಾರ್ ಸ್ವಾಗತಿಸಿ, ಶರೀಫ್ ಕನ್ನಂಗಾರ್ ಕೃತಜ್ಞತೆ ಸಲ್ಲಿಸಿದರು.