×
Ad

ವಸುಧಾ ಪ್ರಭು

Update: 2017-02-11 20:13 IST

ಪರ್ಕಳ, ಫೆ.11: ಇಲ್ಲಿನ ದೇವಿನಗರದ ನಿವಾಸಿ ಕೆ.ಸಿ. ಪ್ರಭು ಅವರ ಧರ್ಮಪತ್ನಿ ವಸುಧಾ ಪ್ರಭು (61) ಶನಿವಾರ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಸಿಂಡಿಕೇಟ್ ಬ್ಯಾಂಕ್‌ನ ಅಧಿಕಾರಿಯಾಗಿ ಧಾರವಾಡ, ಬೆಳಗಾವಿ, ಹೆಬ್ರಿ ಹಾಗೂ ಮಣಿಪಾಲದಲ್ಲಿ 33 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಇವರು ಪತಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News