ದೇವದಾಸಿಯರ ಮಾಸಾಶನ ಹೆಚ್ಚಳ: ಸಚಿವೆ ಉಮಾಶ್ರೀ

Update: 2017-02-18 14:38 GMT

ಬೆಂಗಳೂರು, ಫೆ. 18: ರಾಜ್ಯದಲ್ಲಿನ ಮಾಜಿ ದೇವದಾಸಿಯರ ಮಾಸಾಶನವನ್ನು 500 ರೂ.ಹೆಚ್ಚಳ ಮಾಡಲಾಗಿದೆ. ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

ದೇವದಾಸಿಯರಿಗೆ 1ಸಾವಿರ ರೂ.ಮಾಸಾಶನ ಇದುವರೆಗೂ ನೀಡಲಾಗುತ್ತಿದ್ದು, ಅದನ್ನು 1,500 ರೂ.ಗಳಿಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳವು ಫೆ. 9ರಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ರಾಜ್ಯದಲ್ಲಿರುವ 28,737 ಮಂದಿ ದೇವದಾಸಿಯರು ಇದರ ಲಾಭವನ್ನು ಪಡೆಯಲಿದ್ದಾರೆಂದು ಉಮಾಶ್ರೀ ಪ್ರಕಟಣೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News