ಕನ್ನಡ ಭಾಷೆಯಲ್ಲಿ ತಂತ್ರಜ್ಞಾನ ಪ್ರಗತಿ ಮತ್ತು ಸಾಧ್ಯತೆ: ಸಂವಾದ

Update: 2017-03-05 06:29 GMT

ಬೆಂಗಳೂರು, ಮಾ.5: ಕಣಜ ಜ್ಞಾನ ಕೋಶ ಮತ್ತು ಜ್ಞಾನ ಡಾಟ್ ಕಾಮ್ ಸ ಯೋಗದಲ್ಲಿ ‘ಕನ್ನಡ ಭಾಷೆಯಲ್ಲಿ ತಂತ್ರಜ್ಞಾನ ಪ್ರಗತಿ ಮತ್ತು ಸಾಧ್ಯತೆಗಳು’ ಎಂಬ ವಿಷಯದ ಬಗ್ಗೆ ಸಂವಾದ ಮತ್ತು ಪ್ರದರ್ಶನವು ಇಂದು ನಗರದ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ನಡೆಯಿತು.
  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ. ಎ.ದಯಾನಂದ ಕಾರ್ಯಕ್ರಮ ಉದ್ಘಾಟಿಸಿದರು.
 ಇದೇ ಸಂದರ್ಭ ಶ್ರೀನಿಧಿಯವರ ‘ಕನ್ನಡ ತಂತ್ರಜ್ಞಾನ ನಿನ್ನೆ ಇಂದು ನಾಳೆ‘ ಕಿರುಹೊತ್ತಿಗೆಯನ್ನು ಕನ್ನಡಪ್ರಭ ಪತ್ರಿಕೆಯ ಸಂಪಾದಕ ರವಿ ಹೆಗ್ಗಡೆ ಲೋಕಾರ್ಪಣೆ ಮಾಡಿದರು.
ಕನ್ನಡದ ವಿವಿಧ ತಂತ್ರಾಂಶಗಳ ಸಂಸ್ಥೆಗಳು ಪ್ರದರ್ಶನ ಮಳಿಗೆಗಳನ್ನು ತೆರೆದು ಜನರಿಗೆ ಮಾಹಿತಿ ನೀಡಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News