ಐಟಿ ದಾಳಿ ವಿಚಾರ: ಸಿಎಂ ಹೇಳಿಕೆಗೆ ಡಿವಿ ತಿರುಗೇಟು

Update: 2017-03-18 07:38 GMT

ಬೆಂಗಳೂರು, ಮಾ.18: ಕೇವಲ ಕಾಂಗ್ರೆಸ್ಸಿಗರ ಮೇಲೆ ಮಾತ್ರವಲ್ಲ ದೇಶದ ಎಲ್ಲಾ ಕಡೆಗಳಲ್ಲೂ ಐಟಿ ದಾಳಿ ನಡೆದಿದೆ. ಈ ಕುರಿತಂತೆ ಮುಖ್ಯಮಂತ್ರಿ ಹೇಳಿಕೆ ಸರಿಯಲ್ಲ ಸಚಿವ- ಶಾಸಕರ ನಿವಾಸಗಳ ಮೇಲೆ ಐಟಿ ದಾಳಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ತಿರುಗೇಟು ನೀಡಿದ್ದಾರೆ.

ಸಿಎಂ ಮಾತನಾಡುವಾಗ ಹುಷಾರಾಗಿ ಮಾತನಾಡಬೇಕು. ದೂರು ನೀಡಿದ ಮಾತ್ರಕ್ಕೆ ಯಾರು ದಾಳಿ ಮಾಡಲ್ಲ. ತನಿಖೆಯಾದ ನಂತರ ಖಾತ್ರಿ ಮಾಡಿಕೊಂಡೇ ದಾಳಿ ಮಾಡ್ತಾರೆ. ಈ ರೀತಿ ದೇಶದ ಎಲ್ಲಾ ಕಡೆಗಳಲ್ಲೂ ದಾಳಿ ನಡೆದಿದೆ. ಕೇವಲ ಕಾಂಗ್ರೆಸ್ ಮೇಲೆ ದಾಳಿ ಆಗಿಲ್ಲ.ಮುಖ್ಯಮಂತ್ರಿ ಈ ರೀತಿ ಹೇಳೋದು ಸರಿಯಲ್ಲ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News