ಶಾರ್ಜಾ: ಎ.27ರಂದು ‘ಸುನೇರಿ ಯಾದೇಂ’
Update: 2017-04-25 18:36 GMT
ಶಾರ್ಜಾ, ಎ.25: ಶಾರ್ಜಾದ ಪಾಕಿಸ್ತಾನ್ ಸೋಶಿಯಲ್ ಸೆಂಟರ್ನಲ್ಲಿ ‘ಸುನೇರಿ ಯಾದೇಂ’ ಎಂಬ ಹಳೆ ಮಧುರ ಗೀತೆಗಳ ಸಂಗೀತ ಕಾರ್ಯಕ್ರಮ ಎ.27ರಂದು ನಡೆಯಲಿದೆ.
ಹನೀಫ್ ಪರ್ಲಿಯಾ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ‘ದಕ್ಷಿಣ ಭಾರತದ ರಫಿ’ ಎಂದೇ ಖ್ಯಾತರಾಗಿರುವ ಮಂಗಳೂರಿನ ಠಾಗೋರ್ ದಾಸ್, ಡಾ.ಸ್ವರಲಯ, ಅನಿತಾ ಮಂಗ್ಳೂರು ಭಾಗವಹಿಸುವರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉದ್ಯಮಿ ಅಬ್ದುಲ್ ಅಝೀಝ್, ಝುಲ್ಫಿಕರ್ ಅಲಿ, ಸುಹೈಲ್ ಅಬ್ಬಾಸ್ ಮಾರಿಪಳ್ಳ, ಡಾ.ಮುಹಮ್ಮದ್ ಕಾಪು, ಸಾಜಿದ್ ಅಲಿ, ದಾಸ್ ಕುಡ್ಲ ಹಾಗೂ ಅಶೋಕ್ ಬೈಲೂರು ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.