ವಸಂತ ನಾಡಿಗೇರ ಅವರಿಗೆ ‘ವಿ.ನಾಗರಾಜರಾವ್ ಪ್ರಶಸ್ತಿ’

Update: 2017-04-27 16:44 GMT

ಬೆಂಗಳೂರು,ಎ.27: ಬಿಎಂಶ್ರೀ ಪ್ರತಿಷ್ಠಾನವು ಕೊಡುವ 2017ನೇ ಸಾಲಿನ ‘ವಿ. ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿ’ಗೆ ಪತ್ರಕರ್ತ ವಸಂತ ನಾಡಿಗೇರ ಅವರು ಪಾತ್ರರಾಗಿದ್ದಾರೆ ಎಂದು ಅಧ್ಯಕ್ಷ ಡಾ.ಪಿ ವಿ ನಾರಾಯಣ ತಿಳಿಸಿದ್ದಾರೆ.

 ಮೂರು ದಶಕಗಳಿಂದ ವಸಂತ ನಾಡಿಗೇರ ಅವರು ಕನ್ನಡ ಪತ್ರಿಕಾರಂಗಕ್ಕೆ ಸಲ್ಲಿಸಿರುವ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ, ತೀರ್ಪುಗಾರರ ಸಮಿತಿಯು ಇವರನ್ನು ಒಮ್ಮತದಿಂದ ಆಯ್ಕೆ ಮಾಡಿದೆ.

ಮೇ.31ರಂದು ಸಂಜೆ 6 ಗಂಟೆಗೆ ನಾಗಮಣಿ ಎಸ್. ರಾವ್ ಅಧ್ಯಕ್ಷತೆಯಲ್ಲಿ ಕಸಾಪದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪತ್ರಕರ್ತರೂ ಹೆಸರಾಂತ ಲೇಖಕರೂ ಆಗಿದ್ದ ವಿ. ನಾಗರಾಜರಾವ್ ಅವರ ನೆನಪಿನಲ್ಲಿ ಕುಟುಂಬ ವರ್ಗದವರು ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ಇದೇ ವರ್ಷದಿಂದ ಕೊಡಲಾಗುತ್ತಿದೆ ಎಂದೂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News