ಸರಕಾರಕ್ಕೆ ಶಿಕ್ಷೆ ನೀಡುವವರು ಯಾರು?

Update: 2017-05-05 12:26 GMT

ಜಾರ್ಖಂಡ್ ಸರಕಾರದ ಸಾಮಾಜಿಕ ಭದ್ರತಾ ನಿರ್ದೇಶನಾಲಯ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿ ಕೊಂಡಿದ್ದ 15 ಲಕ್ಷ ಪಿಂಚಣಿದಾರರ ಮಾಹಿತಿ ಕಳೆದ ಶನಿವಾರ ಸೋರಿಕೆಯಾಗಿದೆ. ಸೋರಿಕೆಯಾದ ಮಾಹಿತಿಯಲ್ಲಿ ಅವರ ಆಧಾರ್ ಹಾಗೂ ಮೊಬೈಲ್ ಸಂಖ್ಯೆಗಳು, ಬ್ಯಾಂಕ್ ಖಾತೆ ವಿವರ ಸೇರಿದೆ. ಈ ರಹಸ್ಯ ಮಾಹಿತಿಗಳ ಸೋರಿಕೆ ಈ ಯೋಜನೆಯ 15 ಲಕ್ಷ ಪಿಂಚಣಿದಾರರ ವೈಯಕ್ತಿಕ ವಿವರ ಸಂಗ್ರಹಕ್ಕೆ ಮತ್ತು ಹಣಕಾಸು ಅವ್ಯವಹಾರಕ್ಕೂ ಇದು ಕಾರಣವಾಗುವ ಸಾಧ್ಯತೆ ಇದೆ. ಸರಕಾರ ಶನಿವಾರ ರಾತ್ರಿ ಆ ವೆಬ್‌ಸೈಟ್ ಬ್ಲಾಕ್ ಮಾಡಿದೆ.

ದೇಶದಲ್ಲಿ 12 ಅಂಕಿಗಳ ಗುರುತಿಸುವಿಕೆ ಸಂಖ್ಯೆ ಆಧಾರ್‌ಗೆ ಹೆಸರು ನೋಂದಾಯಿಸಿಕೊಂಡಿರುವ 110 ಕೋಟಿ ಮಂದಿಯ ವೈಯಕ್ತಿಕ ಮಾಹಿತಿಗಳು ಸುರಕ್ಷಿತ ಎಂದು ಮೋದಿ ಸರಕಾರ ಪದೇ ಪದೇ ಹೇಳುತ್ತಿದೆ. ಆದರೆ ಕಾನೂನು ಪ್ರಕಾರ ಈ ಮಾಹಿತಿಗಳನ್ನು ರಹಸ್ಯವಾಗಿಡಲು ಹೆಣಗುತ್ತಿದೆ.

ಜಾರ್ಖಂಡ್ ಸರಕಾರದ ಸಾಮಾಜಿಕ ಭದ್ರತಾ ನಿರ್ದೇಶ ನಾಲಯ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದ 15 ಲಕ್ಷ ಪಿಂಚಣಿದಾರರ ಮಾಹಿತಿ ಕಳೆದ ಶನಿವಾರ ಸೋರಿಕೆಯಾಗಿದೆ. ಸೋರಿಕೆಯಾದ ಮಾಹಿತಿಯಲ್ಲಿ ಅವರ ಆಧಾರ್ ಹಾಗೂ ಮೊಬೈಲ್ ಸಂಖ್ಯೆಗಳು, ಬ್ಯಾಂಕ್ ಖಾತೆ ವಿವರ ಸೇರಿದೆ. ಈ ರಹಸ್ಯ ಮಾಹಿತಿಗಳ ಸೋರಿಕೆ ಈ ಯೋಜನೆಯ 15 ಲಕ್ಷ ಪಿಂಚಣಿದಾರರ ವೈಯಕ್ತಿಕ ವಿವರ ಸಂಗ್ರಹಕ್ಕೆ ಮತ್ತು ಹಣಕಾಸು ಅವ್ಯವಹಾರಕ್ಕೂ ಇದು ಕಾರಣವಾಗುವ ಸಾಧ್ಯತೆ ಇದೆ. ಸರಕಾರ ಶನಿವಾರ ರಾತ್ರಿ ಆ ವೆಬ್‌ಸೈಟ್ ಬ್ಲಾಕ್ ಮಾಡಿದೆ.

ಸೋಮವಾರ ಚಂಡಿಗಡದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ತನ್ನ ಪಡಿತರ ವ್ಯವಸ್ಥೆ ಫಲಾನುಭ ವಿಗಳ ಆಧಾರ್ ಸಂಖ್ಯೆಯನ್ನು ಪ್ರಕಟಿಸಿದೆ. ಈ ಕೇಂದ್ರಾಡಳಿತ ಪ್ರದೇಶದಲ್ಲಿ ಸುಮಾರು 4.9 ಲಕ್ಷ ಮಂದಿ ಫಲಾನುಭವಿಗಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂಥ ಸೋರಿಕೆ ಅಥವಾ ಗುಪ್ತತೆಯ ಉಲ್ಲಂಘನೆ ಪದೇ ಪದೇ ಆಗುತ್ತಿದೆ. ಇತ್ತೀಚೆಗೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಸ್ವಚ್ಛ ಭಾರತ ಮಿಷನ್ ಯೋಜನೆಯ ಫಲಾನುಭವಿಗಳ ಆಧಾರ್ ಸಂಖ್ಯೆಯನ್ನು ಬಹಿರಂಗಪಡಿಸಿದೆ.

ಆಧಾರ್ ಕ್ರೋಡೀಕೃತ ಮಾಹಿತಿಯನ್ನು ಸಂಗ್ರಹಿಸಿಡುವ ಭಾರತದ ವಿಶಿಷ್ಟ ಗುರುತಿಸುವಿಕೆ ಪ್ರಾಧಿಕಾರ ಕಳೆದ ಮಾರ್ಚ್ 29ರಂದು, ಒಂದು ನೋಂದಣಿ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರ ವೈಯಕ್ತಿಕ ಮಾಹಿತಿಯನ್ನು ಟ್ವಿಟರ್‌ನಲ್ಲಿ ಸೋರಿಕೆ ಮಾಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿತ್ತು. ಈ ಗಣ್ಯವ್ಯಕ್ತಿಯ ಮಾಹಿತಿ ಸೋರಿಕೆ ಹಾಗೂ ಪ್ರಾಧಿಕಾರ ತಕ್ಷಣ ಅದಕ್ಕೆ ಸ್ಪಂದಿಸಿದ ಬಗ್ಗೆ ಸಂಸತ್ತಿನಲ್ಲೂ ಚರ್ಚೆ ನಡೆದಿತ್ತು.

ಭದ್ರತಾ ಅಂಶಗಳ ಸಂಶೋಧಕರು ಹೇಳುವಂತೆ, ಆಧಾರ್ ಸಂಖ್ಯೆ ಹಾಗೂ ಸಂಬಂಧಿತ ಭೌಗೋಳಿಕ ಮಾಹಿತಿ ಇಂಟರ್‌ನೆಟ್‌ನ ಸರಳ ಶೋಧದಲ್ಲೂ ಕಂಡುಬರುತ್ತದೆ. ಫೆಬ್ರವರಿ 17ರಂದು ಭದ್ರತಾ ಅಂಶಗಳ ಸಂಶೋಧಕ ಶ್ರೀನಿವಾಸ ಕೊಡಲಿ, ಪ್ರಾಧಿಕಾರದ ಅಧಿಕಾರಿಗಳನ್ನು ಎಚ್ಚರಿಸಿ, ಐದು ಲಕ್ಷ ಅಪ್ರಾಪ್ತ ವಯಸ್ಕರ ಮಾಹಿತಿಯನ್ನು ಒಂದು ವೆಬ್‌ಸೈಟ್‌ನಲ್ಲಿ ಸೋರಿಕೆ ಮಾಡಲಾಗಿದೆ ಎಂದು ಹೇಳಿದ್ದರು.

‘‘ಈ ಮಾಹಿತಿ ಸೋರಿಕೆ ಬಗ್ಗೆ ಸರಕಾರಿ ವೆಬ್‌ಸೈಟ್‌ನ ಅಧಿಕಾರಿಗಳ ಗಮನಕ್ಕೆ ತಂದಾಗ, ಈ ಆರೋಪವನ್ನು ಒಪ್ಪಿಕೊಳ್ಳಲು ಯುಐಡಿಎಐ ಸಿದ್ಧವಿರಲಿಲ್ಲ’’ ಎಂದು ಅವರು ವಿವರಿಸುತ್ತಾರೆ.

‘‘ನಾನು ವರದಿ ಮಾಡಿದ ಒಂದು ಘಟನೆಯಲ್ಲದೇ, ಗ್ರಾಮೀಣಾಭಿವೃದ್ಧಿ ಸಚಿವಾಲಯದ ವೆಬ್‌ಸೈಟ್‌ನಲ್ಲಿ 10 ಕೋಟಿ ನರೇಗಾ ಕಾರ್ಮಿಕರ ಆಧಾರ್ ಸಂಖ್ಯೆ ಮತ್ತು ಇತರ ವಿವರಗಳು ಪ್ರಕಟವಾಗಿವೆ. ಇದು ಮೊದಲೂ ಅಲ್ಲ; ಕೊನೆಯೂ ಅಲ್ಲ. ಏಕೆಂದರೆ ಈ ವೆಬ್‌ಸೈಟ್ ವಿನ್ಯಾಸದಲ್ಲೇ ಆಧಾರ್ ಸಂಖ್ಯೆ ಮತ್ತು ವಿವರಗಳನ್ನು ಯಾರು ದಾಖಲಿಸಿದರೂ ವಿವರ ಕಾಣುವಂತೆ ವಿನ್ಯಾಸಗೊಳಿಸಲಾಗಿದೆ. ಇದಕ್ಕೆ ಅಪ್ಲಿಕೇಶನ್ ಪ್ರೋಗ್ರಾಂ ಇಂಟರ್‌ಪೇಸ್ ಕೂಡಾ ಬೇಕಾಗಿಲ್ಲ. ಸದ್ಯಕ್ಕಂತೂ ಪ್ರತಿಯೊಬ್ಬರೂ ತಮ್ಮ ಸ್ವಂತ ಆಧಾರ್ ಸಂಖ್ಯೆ ಡೇಟಾಬೇಸ್ ಹೊಂದಬಹುದಾಗಿದೆ’’.

ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನಸಾಮಾನ್ಯರ ಮಾಹಿತಿಗಳು ಸೋರಿಕೆಯಾಗುವ ಬಗ್ಗೆ ಸರಕಾರ ಮಾತ್ರ ವೌನವಾಗಿದೆ. ಧೋನಿಯವರ ಅರ್ಜಿ ಮಾಹಿತಿಯನ್ನು ಸೋರಿಕೆ ಮಾಡಿದ ನೋಂದಣಿ ಏಜೆನ್ಸಿ ಸೇರಿದಂತೆ ಒಂಬತ್ತು ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಂಡ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡಿತು. ಆದರೆ ಮಾಹಿತಿಗಳ ಭದ್ರತೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ ಸರಕಾರಿ ಏಜೆನ್ಸಿ ವಿರುದ್ಧ ಮಾತ್ರ ಇದುವರೆಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ.

ಈ ಸೋರಿಕೆ ಏಕೆ ಗಂಭೀರ?

ಆಧಾರ್ (ಮಾಹಿತಿ ಹಂಚಿಕೆ) ನಿಬಂಧನೆಯ ಸೆಕ್ಷನ್ 6ರ ಅನ್ವಯ, ವ್ಯಕ್ತಿಯ ಆಧಾರ್ ಸಂಖ್ಯೆಯನ್ನು ಯಾವ ವ್ಯಕ್ತಿಯಾಗಲೀ, ಸಂಸ್ಥೆಯಾಗಲೀ ಬಹಿರಂಗಪಡಿಸುವಂತಿಲ್ಲ. ಅಥವಾ ಎಲ್ಲೂ ಸಾರ್ವಜನಿಕವಾಗಿ ಪ್ರದರ್ಶಿಸುವಂತಿಲ್ಲ. ರಹಸ್ಯವನ್ನು ಕಾಪಾಡುವುದನ್ನು ಕಡ್ಡಾಯಪಡಿಸುವಲ್ಲಿ, ನೀತಿ ನಿರೂಪಕರು ಏಕೈಕ, ಸಾರ್ವತ್ರಿಕ, ಡಿಜಿಟಲ್ ಐಡೆಂಟಿಟಿ ಸಂಖ್ಯೆಯನ್ನು ಭಾರತೀಯ ನಾಗರಿಕನ ಗುರುತು ದೃಢೀಕರಣಕ್ಕಾಗಿ ಬಳಸುವಂತೆ ಸೂಕ್ಷ್ಮತೆಯಿಂದ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದ್ದರು.

ಈ ಗುರುತಿಸುವಿಕೆಯನ್ನು ವ್ಯಕ್ತಿಯ ಬಯೋಮೆಟ್ರಿಕ್ಸ್ ದೃಢೀಕರಿಸುವ ಮೂಲಕ ಅಥವಾ ಆಧಾರ್ ಸಂಖ್ಯೆಯನ್ನು ಭೌಗೋಳಿಕ ಮಾಹಿತಿಗಳ ಜತೆ ತಾಳೆ ನೋಡುವ ಮೂಲಕ ಇಲ್ಲವೇ, ಕೇಂದ್ರೀಯ ಐಡೆಂಟಿಟಿಗಳ ಡಾಟಾ ಸಂಗ್ರಹಾಗಾರದಿಂದ ಮೊಬೈಲ್‌ಗೆ/ ಇ-ಮೇಲ್‌ಗೆ ಕಳುಹಿಸುವ ಓಟಿಪಿ ಮೂಲಕ ಮಾಡಬಹುದಾಗಿದೆ. ಈ ಎಲ್ಲ ಪ್ರಕ್ರಿಯೆಗಳಲ್ಲೂ ಯುಐಡಿಎಐ, ನಿರ್ದಿಷ್ಟ ಆಧಾರ್ ಸಂಖ್ಯೆಗೆ ಆ ಮಾಹಿತಿಗಳು ತಾಳೆಯಾಗುತ್ತವೆಯೇ ಎಂದು ಖಚಿತಪಡಿಸುತ್ತದೆ.

ಆಧಾರ್ ನಿಬಂಧನೆಗಳ ಅನ್ವಯ, ಇಲೆಕ್ಟ್ರಾನಿಕ್ ವಿಧಾನದ ಮೂಲಕ ನಿಮ್ಮ ಗ್ರಾಹಕ ಸ್ಪಷ್ಟನೆಗಳನ್ನು ಕೇಳಬೇಕಾದರೆ, ಬಯೋಮೆಟ್ರಿಕ್ ದೃಢೀಕರಣ ಬೇಕಾಗುತ್ತದೆ. ಈ ಕ್ರಮದಿಂದಾಗಿ ವಂಚನೆ ಸಾಧ್ಯವಿಲ್ಲ. ಸರಕಾರಿ ಅಧಿಕಾರಿಗಳು ನಿರ್ಲಕ್ಷ್ಯದಿಂದ ದೊಡ್ಡ ಪ್ರಮಾಣದಲ್ಲ ಆಧಾರ್ ಸಂಖ್ಯೆ ಹಾಗೂ ಭೌಗೋಳಿಕ ಮಾಹಿತಿಗಳನ್ನು ಸೋರಿಕೆ ಮಾಡಿರುವುದರಿಂದ, ಇತರ ವಂಚನಾಕ್ರಮಗಳಿಗೆ ಕಾರಣವಾಗಲಿದೆ.

ಹಲವು ಮೊಬೈಲ್ ಆ್ಯಪ್‌ಗಳು, ಸಂಭಾವ್ಯ ಉದ್ಯೋಗಿಗಳು, ಬಾಡಿಗೆದಾರರನ್ನು ಆಧಾರ್ ಸಂಖ್ಯೆ ಮೂಲಕ ದೃಢೀಕರಿಸುವ ವಾಣಿಜ್ಯ ಸೇವೆ ನೀಡುತ್ತಿವೆ. ಉದಾಹರಣೆಗೆ ಟ್ರಸ್ಟ್‌ಐಡಿ ಎಂಬ ಮೊಬೈಲ್ ಆಧರಿತ ಪ್ಲಾಟ್‌ಫಾರಂ, ಸಾರ್ವಜನಿಕರ ಗುರುತಿಸುವಿಕೆ ದೃಢೀಕರಣವನ್ನು ಆಧಾರ್ ಗುರುತಿಸುವಿಕೆ ಮೂಲಕ ಮಾಡುತ್ತದೆ. ಅವರ ಬಯೊಮೆಟ್ರಿಕ್ ಬಳಸಿಕೊಂಡು ಅಥವಾ ಭೌಗೋಳಿಕ ಮಾಹಿತಿಯನ್ನು ತಾಳೆ ಹಾಕುವ ಮೂಲಕ ಇಲ್ಲವೇ, ಆಧಾರ್ ಸಂಖ್ಯೆಯ ಜತೆಗೆ ಇರುವ ಒಂದು ಬಾರಿಯ ಪಾಸ್‌ವರ್ಡ್ ಬಳಸಿಕೊಂಡು ಈ ದೃಢೀಕರಣ ಮಾಡುತ್ತದೆ. ಇಂಥ ಪ್ಲಾಟ್‌ಫಾರಂನಿಂದ ಯುಐಡಿಎಐಗೆ ಸ್ಪಷ್ಟನೆ ಕೋರಿ ಸಂದೇಶ ರವಾನೆಯಾದಾಗ, ಈ ದೃಢೀಕರಣವನ್ನು ಹೌದು/ ಇಲ್ಲ ಎಂದು ಪ್ರಾಧಿಕಾರ ಪ್ರಮಾಣಿಸುತ್ತದೆ.

ಹ್ಯಾಸ್‌ಜೀಕ್ ಎಂಬ ಸಾಫ್ಟ್‌ವೇರ್ ಅಭಿವೃದ್ಧಿ ಸಂಸ್ಥೆಯ ಸಹಸಂಸ್ಥಾಪಕ ಕಿರಣ್ ಜೊನ್ನಲಗುಡ್ಡ ಹೇಳುವಂತೆ, ಇಂಥ ವಂಚನೆಯನ್ನು ಸುಲಭವಾಗಿ ಪತ್ತೆ ಮಾಡುವುದು ಮತ್ತು ಆರೋಪಿಗಳನ್ನು ಹಿಡಿಯುವುದು ಕಷ್ಟ. ಇದು ಮೊಬೈಲ್ ಆ್ಯಪ್ ಮೂಲಕ ನಡೆಯುವ ಇಲೆಕ್ಟ್ರಾನಿಕ್ ದೃಢೀಕರಣವಾಗಿರುವುದರಿಂದ, ಯಾವುದೇ ಸಂಕೇತ ಅಥವಾ ಮಾತು ಇಲ್ಲಿ ಇರುವುದಿಲ್ಲ.

ಒಬ್ಬ ವ್ಯಕ್ತಿಗೆ ವಂಚನೆಯಾದಾಗ, ಅವರ ಹಾಲಿ ಆಧಾರ್ ಸಂಖ್ಯೆಯನ್ನು ಹೊಸದಾಗಿ ಹೇಗೆ ನೀಡಲಾಗುತ್ತದೆ ಎನ್ನುವುದು ಸ್ಪಷ್ಟವಾಗಿಲ್ಲ. ಏಕೆಂದರೆ ಇದು ಮೂರನೆ ಪಕ್ಷದ ಡಾಟಾಬೇಸ್ ಜತೆ ಸಂಪರ್ಕ ಹೊಂದಿರುತ್ತದೆ ಮತ್ತು ಆ ಸಂಖ್ಯೆ ಆ ವ್ಯಕ್ತಿಗೆ ಮಾತ್ರ ಮೀಸಲಾಗಿರುತ್ತದೆ. ಹೊಸ ಹಾಗೂ ಹಳೆಯ ಮಾಹಿತಿಯನ್ನು ಒಳಗೊಂಡ ಕಾರ್ಡ್‌ಗಳನ್ನು ವ್ಯಕ್ತಿ ತೋರಿಸಿದರೆ ಮೂರನೆ ಪಕ್ಷದವರು ಯಾವ ಕ್ರಮ ಕೈಗೊಳ್ಳಬಹುದು? ಎನ್ನುವುದು ಅವರ ಪ್ರಶ್ನೆ.

ಇದಕ್ಕೆ ಇರುವ ಏಕೈಕ ಮಾರ್ಗೋಪಾಯವೆಂದರೆ, ಚಿಪ್ ಅಥವಾ ಪಿಐಎನ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ನಂತೆ, ಇದು ರದ್ದುಮಾಡಬಹುದಾದ ಹಾರ್ಡ್‌ವೇರ್ ಟೋಕನ್‌ಗಳಾಗಿರಬೇಕು. ಚಿಪ್ ಅಥವಾ ಪಿನ್ ಕಾರ್ಡ್ ಇಲ್ಲವೇ ಡೆಬಿಟ್ ಕಾರ್ಡ್, ಸಿಮ್ ಕಾರ್ಡ್‌ನಂತೆ ಬದಲಾಯಿಸಲು ಅವಕಾಶ ಇರಬೇಕು ಎನ್ನುವುದು ಅವರ ಸಲಹೆ.

ಸರಕಾರ ಹಲವು ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸಿರುವುದು ಕೂಡಾ ಆತಂಕಕ್ಕೆ ಕಾರಣವಾಗಿದೆ. ಆಧಾರ್ ಕಾರ್ಡನ್ನು ವಾಸ್ತವವಾಗಿ ಗುರುತಿಸುವಿಕೆ ಉದ್ದೇಶಕ್ಕಾಗಿ ಮಾತ್ರ ನೀಡಲಾಗಿದೆ.

‘‘ಯುಐಡಿಎಐ ಅರ್ಜಿದಾರರಿಗೆ ನೀಡಿರುವ ಆಧಾರ್ ಕಾರ್ಡ್‌ಗಳಲ್ಲಿ ಯಾವುದೇ ಹಾಲ್‌ಮಾರ್ಕ್ ಅಥವಾ ಭೌತಿಕ ಸಹಿಯನ್ನಾಗಲೀ, ಭದ್ರತಾ ಮಾಹಿತಿಯನ್ನಾಗಲೀ ಹಾಕಿಲ್ಲ. ಇದು ಕೇವಲ ಬಣ್ಣರ ಪ್ರಿಂಟ್ ಔಟ್ ಆಗಿದ್ದು, ಯಾರು ಬೇಕಾದರೂ ನಕಲಿ ತಯಾರಿಸಲು ಅವಕಾಶವಿದೆ. ಸಾರ್ವಜನಿಕ ಡೊಮೈನ್‌ಗಳಲ್ಲಿ ಸಿಕ್ಕಿದ ಆಧಾರ್ ಸಂಖ್ಯೆ ಅಥವಾ ಭೌಗೋಳಿಕ ಮಾಹಿತಿ ಆಧರಿಸಿ, ನಕಲಿ ಆಧಾರ್ ಕಾರ್ಡ್ ತಯಾರಿಸುವ ಅಪಾಯವನ್ನೂ ಅಲ್ಲಗಳೆಯುವಂತಿಲ್ಲ’’ ಎಂದು ಬ್ಲಾಗ್ ಬರಹಗಾರ ಸೆಂಥಿಲ್ ಎಂಬವರು ಹೇಳುತ್ತಾರೆ.

ಪ್ರತಿ ಬಾರಿ ಆಧಾರ್ ಸಂಖ್ಯೆಯನ್ನು ದೃಢೀಕರಿಸುವ ವೇಳೆ ಯುಐಡಿಎಐ, ಕಾರ್ಡ್‌ದಾರರಿಗೆ ಮೊಬೈಲ್ ಅಥವಾ ಇ-ಮೇಲ್ ಮಾಹಿತಿಯನ್ನು ನೀಡುತ್ತದೆ. ಆದರೆ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಲ್ಲ.

ಇನ್ನೂ ಗಂಭೀರ ಅಂಶವೆಂದರೆ, ಕಾನೂನಿನ ಅನ್ವಯ, ಆಧಾರ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಆಧರಿಸಿ ಯಾವುದೇ ಅಪರಾಧ ಕೃತ್ಯಗಳು ನಡೆದಾಗ, ಕಾರ್ಡ್‌ದಾರರಿಗೆ ಆ ಬಗ್ಗೆ ಮಾಹಿತಿ ನೀಡುವ ಕಾನೂನುಬದ್ಧತೆ ಯುಐಡಿಎಐಗೆ ಇಲ್ಲ. ಜತೆಗೆ ಕಾರ್ಡ್ ಬಳಕೆದಾರ ನೇರವಾಗಿ ನ್ಯಾಯಾಲಯವನ್ನೂ ತಮಗೆ ಆಗಿರುವ ಅನ್ಯಾಯಕ್ಕಾಗಿ ಸಂಪರ್ಕಿಸುವಂತಿಲ್ಲ. ಏಕೆಂದರೆ ಆಧಾರ್ ಕಾಯ್ದೆಯ ಸೆಕ್ಷನ್ 47 (1) ಅನ್ವಯ, ಖಾಸಗಿತನದ ಉಲ್ಲಂಘನೆಯಾದಾಗ ದೂರು ನೀಡುವ ಅಧಿಕಾರ ಕೇವಲ ಯುಐಡಿಎಐಗೆ ಮಾತ್ರ ಇರುತ್ತದೆ?

ನಿರ್ಲಕ್ಷ ಮನೋಭಾವ?

ಇಂಥ ಮಾಹಿತಿ ಉಲ್ಲಂಘನೆ ಪ್ರಕರಣಗಳನ್ನು ಸರಕಾರಿ ಅಧಿಕಾರಿಗಳು ನಿರ್ಲಕ್ಷಿಸುತ್ತಾರೆ. ಒಬ್ಬ ನಿರ್ದಿಷ್ಟ ವ್ಯಕ್ತಿಯ ಗುರುತಿನ ಬಗ್ಗೆ ಸ್ಪಷ್ಟನೆ ಬಯಸಿದಲ್ಲಿ ಮಾತ್ರ ಮಾಹಿತಿ ಪರದೆ ಯಲ್ಲಿ ಕಂಡುಬರುತ್ತದೆ. ಎಲ್ಲ ಪಿಂಚಣಿದಾರರ ಮಾಹಿತಿ ಯನ್ನು ಏಕಕಾಲಕ್ಕೆ ಇದು ಪ್ರದರ್ಶಿಸುವುದಿಲ್ಲ. ಯಾವುದಾದರೂ ದುರುದ್ದೇಶಕ್ಕೆ ಇದನ್ನು ಪಡೆಯಲು ಬಯಸಿದರೆ, ಎಲ್ಲ ಸಿದ್ಧವಾಗಿ ಅವರಿಗೆ ಸಿಗುವುದಿಲ್ಲ ಎನ್ನುವುದು ಜಾರ್ಖಂಡ್‌ನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾಮಾಜಿಕ ಭದ್ರತೆ ಇಲಾಖೆಯ ಕಾರ್ಯದರ್ಶಿ ಎಂ.ಎಸ್.ಬಾಟಿಯಾ ಅವರ ಸಮರ್ಥನೆ.

ಇದು ವಿಶೇಷವಾಗಿ ಅಭಿವೃದ್ಧಿಪಡಿಸಿರುವ ಸಾಫ್ಟ್‌ವೇರ್‌ನ ಸಮಸ್ಯೆ ಆಗಿದ್ದು, ಇದನ್ನು ಈಗ ಬಗೆಹರಿಸಲಾಗಿದೆ. ಇತರ ರಾಜ್ಯ ಗಳ ಹಲವು ವಿಭಾಗಗಳ ಅಧಿಕಾರಿಗಳಲ್ಲಿ ಆಧಾರ್ ರಹಸ್ಯ ಕಾಪಾಡಿಕೊಳ್ಳುವ ಬಗೆಗೆ ವಿವಿಧ ಹಂತದ ಮಾಹಿತಿ ಹಾಗೂ ಜಾಗೃತಿ ಇದೆ. ಛತ್ತೀಸ್‌ಗಡ ಸಾರ್ವಜನಿಕ ವಿತರಣೆ ವ್ಯವಸ್ಥೆಯ ಆಧಾರ್ ದೃಢೀಕರಣ ಪ್ರಕ್ರಿಯೆಯ ಮೇಲ್ವಿಚಾರಣೆ ಹೊಣೆ ಹೊತ್ತಿರುವ ನ್ಯಾಶನಲ್ ಇನ್‌ಫಾರ್ಮೇಟಿಕ್ ಸೆಂಟರ್‌ನ ನಿರ್ದೇಶಕ ಎ.ಕೆ.ಸೋಮಶೇಖರ್ ಅವರು, ಮಾಹಿತಿಗಳನ್ನು ಗುಪ್ತವಾಗಿಡಬೇಕು ಎಂಬ ಬಗ್ಗೆ ಅಧಿಕಾರಿಗಳಿಗೆ ಅರಿವು ಇದೆ ಎಂದು ಹೇಳುತ್ತಾರೆ. ಆಧಾರ್ ಕಾಯ್ದೆ ಆಂಗೀಕಾರವಾದ ಬಳಿಕ, ಕಳೆದ ಒಂದು ವರ್ಷದಲ್ಲಿ, ಹೇಗೆ ಆಧಾರ್ ಮಾಹಿತಿಯು ವ್ಯಕ್ತಿಗಳ ಮೊಬೈಲ್ ಸಂಖ್ಯೆಯಂತೆ ಹೇಗೆ ಖಾಸಗಿ ಎಂಬ ಬಗ್ಗೆ ಕೇಂದ್ರದಿಂದ ಹಲವು ಸೂಚನೆಗಳು ಬಂದಿವೆ. ಛತ್ತೀಸ್‌ಗಡದಲ್ಲಿ ಪಡಿತರಕ್ಕೆ, ಎನ್‌ಐಸಿ ನಿರ್ವಹಿಸುವ ಸರ್ವರ್ ಇದೆ. ಯಾವುದನ್ನು ಪ್ರದರ್ಶಿಸಬಹುದು; ಯಾವುದನ್ನು ಪ್ರದರ್ಶಿಸಬಾರದು ಎನ್ನುವು ದನ್ನು ಸುಲಭವಾಗಿ ನಿರ್ಧರಿಸಬಹುದು. ಆದರೆ ನಾಳೆ ಪಾಸ್‌ವರ್ಡ್ ಹೊಂದಿರುವ ಸಿಬ್ಭಂದಿ ಇದನ್ನು ಬೇರೆಯವರೊಂದಿಗೆ ಹಂಚಿಕೊಂಡರೆ, ಆಗ ನಾವು ಏನೂ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ.

ಕೇರಳದಲ್ಲಿ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಇಲೆಕ್ಟ್ರಾನಿಕ್ ಆರೋಗ್ಯ ದಾಖಲೆಗಳನ್ನು ಸೃಷ್ಟಿಸುವ ಯೋಜನೆಯ ಮೇಲ್ವಿಚಾರಣೆ ನಡೆಸುತ್ತಿರುವ ಅಧಿಕಾರಿಯೊಬ್ಬರ ಪ್ರಕಾರ, ಮಾಹಿತಿಯ ಭದ್ರತೆ ವಿಚಾರ ಇದುವರೆಗೆ ಯಾವುದೇ ಕಳವಳಕ್ಕೆ ಕಾರಣವಾಗಿಲ್ಲ. ಆಧಾರ್ ಸಂಖ್ಯೆ ರಹಸ್ಯ ಎನ್ನುವುದು ಯೋಜನೆ ವ್ಯವಸ್ಥಾಪಕರಿಗೆ ಇನ್ನೂ ಮನವರಿಕೆಯಾಗಿಲ್ಲ. ಅವರು ತಮ್ಮ ಕಡೆಯಿಂದ ಮಾಹಿತಿ ಭದ್ರವಾಗಿರುವಂತೆ ನೋಡಿಕೊಳ್ಳುತ್ತಾರೆ. ಆದರೆ ಬಳಕೆದಾರರ ದೃಷ್ಟಿಯಿಂದ ರಹಸ್ಯವಾಗಿರುವಂತೆ ನೋಡಿಕೊಳ್ಳುವ ಬಗ್ಗೆ ಗಮನ ಹರಿಸುತ್ತಿಲ್ಲ ಎನ್ನುವುದು ಅವರ ನಿಲುವು.

ರಾಜ್ಯ ಸರಕಾರಗಳು ಫಲಾನುಭವಿಗಳಿಗೆ ಸಂಬಂಧಿಸಿದಂತೆ ಆಧಾರ್ ಸಂಖ್ಯೆ, ಭೌಗೋಳಿಕ ಮಾಹಿತಿ ಅಥವಾ ಹಣಕಾಸು ವಿವರಗಳು ಸೇರಿದಂತೆ ಯಾವುದೇ ಸೂಕ್ಷ್ಮ ಮಾಹಿತಿಗಳನ್ನು ಬಹಿರಂಗಪಡಿಸಬಾರದು ಎಂದು ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಸುತ್ತೋಲೆಯನ್ನು 2017ರ ಮಾರ್ಚ್ 25ರಂದು ನೀಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ‘‘ಯಾವುದೇ ಆಧಾರ್ ಸಂಖ್ಯೆಯನ್ನು ಸಾರ್ವಜನಿಕವಾಗಿ ನಾವು ಪ್ರದರ್ಶಿಸುತ್ತಿಲ್ಲ. ಈ ಬಗ್ಗೆ ನಮ್ಮ ಅಧಿಕಾರಿಗಳು ಇನ್ನಷ್ಟು ಪರಿಶೀಲನೆ ನಡೆಸಲಿದ್ದಾರೆ’’ ಎಂದು ಎನ್‌ಐಸಿಗೆ ಹೇಳಿದ್ದೇವೆ ಎಂದು ಇಲಾಖೆಯ ಹಿರಿಯ ವಿಶ್ಲೇಷಕ ಎಂ.ಎಂ.ಚಂದ್ರ ವಿವರಿಸುತ್ತಾರೆ. ಆದರೆ ಆಧಾರ್ ಸಂಖ್ಯೆಯನ್ನು ರಹಸ್ಯ ಎಂದು ಏಕೆ ವರ್ಗೀಕರಿಸಲಾಗಿದೆ ಎನ್ನುವುದು ತಿಳಿಯದು ಎನ್ನುವುದು ಅವರ ಅಭಿಪ್ರಾಯ.

ಗುಜರಾತ್‌ನಲ್ಲಿ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ವಿಭಾಗದ ನಿರ್ದೇಶ ರಂಜಿತ್ ಕುಮಾರ್, ಆಧಾರ್ ಸಂಖ್ಯೆಯನ್ನು ಪಡಿತರ ಚೀಟಿಗಳ ಜತೆ ಸಂಪರ್ಕಿಸುವ ಯೋಜನೆಯ ಮೇಲುಸ್ತುವಾರಿ ವಹಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಯುಐಡಿಎಐನ ಹೆಚ್ಚುವರಿ ನಿರ್ದೇಶಕರು ರಾಜ್ಯಕ್ಕೆ ಭೇಟಿ ನೀಡಿ, ಎಲ್ಲ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಆಧಾರ್ ಸಂಖ್ಯೆಯ ಖಾಸಗಿತನ ಹಾಗೂ ಹೇಗೆ ಆಧಾರ್ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಬಾರದು ಎಂದು ಅರಿವು ಮೂಡಿಸುವ ಸಲುವಾಗಿ ಈ ಸಭೆ ಆಯೋಜಿಸಲಾಗಿತ್ತು. ಆದರೆ ಆಧಾರ್ ಅಂಕಿ ಅಂಶಗಳನ್ನು ನಿರ್ವಹಿಸುವ ಬಗ್ಗೆ ಯುಐಡಿಎಐ ರಾಜ್ಯಗಳಿಗೆ ಯಾವ ತರಬೇತಿಯನ್ನೂ ನೀಡು ವುದಿಲ್ಲ. ಆದರೆ ವಾಸ್ತವವಾಗಿ ಮಾಹಿತಿಯ ಕೆಲ ಭಾಗವನ್ನು ಹುದುಗಿಸಿಡುವುದು ಕಷ್ಟಸಾಧ್ಯ. ಇದಕ್ಕೆ ವಿಶೇಷ ತರಬೇತಿಯ ಅಗತ್ಯವಿದೆ. ಆಗ ಮಾತ್ರ ಹಾಗೆ ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ ಎನ್ನುವುದು ಅವರ ನಂಬಿಕೆ.

ರಾಜಸ್ಥಾನದಲ್ಲಿ ಯುಐಡಿಎಐ ವಿಶೇಷಾಧಿಕಾರಿಯಾಗಿರುವ ಹನ್ಸರಾಜ್ ಯಾದವ್ ಹೇಳುವಂತೆ, ‘‘ಆಧಾರ್ ಸಂಖ್ಯೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಬಾರದು ಎಂದು ಸಚಿವಾಲಯದಿಂದ ಸೂಚನೆ ಬಂದಿದೆ. ಸುಪ್ರೀಂಕೋರ್ಟ್ ತೀರ್ಪು ಮತ್ತು ಆಧಾರ್ ಕಾಯ್ದೆ ಎರಡು ಕೂಡಾ ಆಧಾರ್ ಸಂಖ್ಯೆ ಪ್ರದರ್ಶಿಸುವುದನ್ನು ನಿಷೇಧಿಸುತ್ತದೆ’’

‘‘ಆದರೆ ಆಧಾರ್ ಸಂಖ್ಯೆಯ ಪ್ರದರ್ಶನವನ್ನು ನಿಷೇಧಿಸಿಲ್ಲ. ಆಧಾರ್ ಸಂಖ್ಯೆಯಲ್ಲಿ ಅಂತರ್ಗತವಾದ ಮಾಹಿತಿಗಳಾದ ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆಯಂಥ ಮಾಹಿತಿಯನ್ನಷ್ಟೇ ಬಹಿರಂಗಪಡಿಸುವಂತಿಲ್ಲ’’ ಎನ್ನುವುದು ಜೈಪುರದಲ್ಲಿ ಯುಐಡಿಎಐ ಯೋಜನಾಧಿಕಾರಿಯಾಗಿರುವ ಒಬ್ಬ ಅಧಿಕಾರಿಯ ಅನಿಸಿಕೆ.

ಏಕೆಂದರೆ ಅಂಥ ಮಾಹಿತಿಯನ್ನು ದುರುಪಯೋಗ ಮಾಡಿ ಕೊಳ್ಳುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಅದನ್ನು ಬಹಿರಂಗ ಪಡಿಸುವಂತಿಲ್ಲ. ಉದಾಹರಣೆಗೆ ಹಲವು ಬ್ಯಾಂಕುಗಳು ಈಗಾಗಲೇ ತಮ್ಮ ಗ್ರಾಹಕರ ಆಧಾರ್ ಮಾಹಿತಿಗಳನ್ನು ನೋಟಿಸ್ ಬೋರ್ಡ್‌ನಲ್ಲಿ ಪ್ರದರ್ಶಿಸುತ್ತಿವೆ. ಇದರಿಂದ ಭೌಗೋಳಿಕ ಮಾಹಿತಿಯನ್ನು ಬಳಸಿಕೊಂಡು, ಆಧಾರ್ ಸಂಖ್ಯೆಯ ಜತೆ ಸಂಪರ್ಕಿಸಿದ ಮೊಬೈಲ್ ಸಂಖ್ಯೆಯನ್ನು ಬದಲಿಸಲು ಅವಕಾಶವಾಗುತ್ತದೆ. ಹೀಗೆ ಮಾಡುವುದರಿಂದ, ತಮ್ಮ ಮೊಬೈಲ್‌ಗೆ ಒಟಿಪಿ ಪಡೆಯಲು ಸಾಧ್ಯವಾಗುತ್ತದೆ. ಬಳಿಕ ವ್ಯಕ್ತಿಗಳು ತಮ್ಮ ಬ್ಯಾಂಕ್ ಖಾತೆ ಮಾಹಿತಿ ಪಡೆಯಲು ಸಾಧ್ಯ ಎಂದು ಅವರು ಸ್ಪಷ್ಟಪಡಿಸುತ್ತಾರೆ. ಇಂಥ ಲೋಪಗಳ ಬಗ್ಗೆ ಸರಕಾರ ಹೆಚ್ಚು ಜವಾಬ್ದಾರಿ ಯುತವಾಗಿ ವರ್ತಿಸಬೇಕು ಎಂದು ರಾಂಚಿ ವಿಶ್ವ ವಿದ್ಯಾನಿಲ ಯದ ಅಭಿವೃದ್ಧಿ ಅರ್ಥಶಾಸ್ತ್ರಜ್ಞ ಜೇನ್ ಡ್ರೇಝ್ ಅಭಿಪ್ರಾಯಪಡುತ್ತಾರೆ.

‘‘ಆಧಾರ್ ಹಾಗೂ ಬ್ಯಾಂಕ್ ಖಾತೆ ಸಂಖ್ಯೆಯನ್ನು ಸರಕಾರಿ ವೆಬ್‌ಸೈಟ್‌ಗಳಲ್ಲಿ ಬಹಿರಂಗಪಡಿಸಿರುವುದು ತಾತ್ಕಾಲಿಕ ತಾಂತ್ರಿಕ ಲೋಪ ಎಂದು ಹೇಳಲಾಗುತ್ತಿದೆ. ಇದು ತಿಂಗಳುಗಳ ಕಾಲ ಅಲ್ಲದಿದ್ದರೂ ಕೆಲ ವಾರಗಳ ಕಾಲ ಕಾಣಸಿಗುತ್ತದೆ’’ ಎಂದು ಅವರು ಹೇಳುತ್ತಾರೆ. ಇನ್ನೂ ಆತಂಕದ ವಿಷಯವೆಂದರೆ, ಮಾಹಿತಿ ಸೋರಿಕೆ ಸಂತ್ರಸ್ತರು ಈ ಬಗ್ಗೆ ಯಾವ ದೂರನ್ನೂ ನೀಡುವಂತಿಲ್ಲ. ಏಕೆಂದರೆ ಆಧಾರ್ ಕಾಯ್ದೆ ಪ್ರಕಾರ, ದೂರು ನೀಡುವ ಅಧಿಕಾರ ಯುಐಡಿಎಐ ಬಳಿ ಇರುತ್ತದೆ. ಜತೆಗೆ ಇಂಥ ಖಾಸಗಿತನ ಉಲ್ಲಂಘನೆ ಬಗ್ಗೆ ಮೇಲ್ವಿಚಾರಣೆ ನಡೆಸುವ ಕಾನೂನುಬದ್ಧ ಜವಾಬ್ದಾರಿಯೂ ಯುಐಡಿಎಐನದ್ದು ಎಂದು ಹೇಳುತ್ತಾರೆ.
 

Writer - ಅನುಮೇಹ ಯಾದವ್

contributor

Editor - ಅನುಮೇಹ ಯಾದವ್

contributor

Similar News