ಎನ್.ಗೋಪಾಲಕೃಷ್ಣ ಪ್ರಭು
Update: 2017-05-09 17:10 GMT
ಶಿರ್ವ, ಮೇ 9: ಭಾರತೀಯ ಜನತಾ ಪಕ್ಷದ ಕಾಪು ಕ್ಷೇತ್ರ ಸಮಿತಿಯ ಮಾಜಿ ಉಪಾಧ್ಯಕ್ಷ, ಶಿರ್ವ ಗ್ರಾಪಂನಲ್ಲಿ ಸತತ ಮೂರನೇ ಅವಧಿಯ ಸದಸ್ಯ ಎನ್.ಗೋಪಾಲಕೃಷ್ಣ ಪ್ರಭು (62) ಅಲ್ಪಕಾಲದ ಅಸೌಖ್ಯದಿಂದ ಕಳೆದ ರಾತ್ರಿ ನಿಧನ ಹೊಂದಿದರು. ಇವರು ಪತ್ನಿ, ಓರ್ವಪುತ್ರನನ್ನು ಅಗಲಿದ್ದಾರೆ.
ಪ್ರಭು ಅವರ ನಿಧನಕ್ಕೆ ಶಿರ್ವ ಗ್ರಾಪಂ ಅಧ್ಯಕ್ಷೆ ವಾರಿಜಾ ಪೂಜಾರಿ, ಉಪಾಧ್ಯಕ್ಷ ದೇವದಾಸ್ ನಾಯಕ್, ಪಿಡಿಒ ಮಾಲತಿ, ಗ್ರಾಪಂ ಸದಸ್ಯರು, ಬಿಜೆಪಿ ಹಿರಿಯ ನಾಯಕರಾದ ಸೋಮಶೇಖರ ಭಟ್, ಮಟ್ಟಾರು ರತ್ನಾಕರ ಹೆಗ್ಡೆ, ಉಪೇಂದ್ರ ನಾಯಕ್, ಕುಯಿಲಾಡಿ ಸುರೇಶ್ ನಾಯಕ್, ಸುವರ್ಧನ್ ನಾಯಕ್, ವಿಲ್ಸನ್ ರೊಡ್ರಿಗಸ್, ಜೆರಾಲ್ಡ್ ಫೆರ್ನಾಂಡಿಸ್, ಕಟಪಾಡಿ ಶಂಕರ ಪೂಜಾರಿ ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.