ಕರ್ಕಿ ಕೃಷ್ಣಮೂರ್ತಿ, ಲೋಕಾಪುರಗೆ ಮಾಸ್ತಿ ಪುರಸ್ಕಾರ

Update: 2017-05-17 16:17 GMT

 ಬೆಂಗಳೂರು, ಮೇ 17: ಮಾಸ್ತಿ ಟ್ರಸ್ಟ್‌ನಿಂದ ಮಾಸ್ತಿ ಅಯ್ಯಂಗಾರ್ 126 ನೆ ವರ್ಷದ ಸಂಸ್ಮರಣೆ ಅಂಗವಾಗಿ ನೀಡುವ 2017 ನೆ ಸಾಲಿನ ಮಾಸ್ತಿ ಕಥಾ ಪುಸ್ತಕ ಪುರಸ್ಕಾರಕ್ಕೆ ಲೇಖಕ ಕರ್ಕಿ ಕೃಷ್ಣಮೂರ್ತಿ ಅವರ ‘ಗಾಳಿಗೆ ವೆುತ್ತಿದ ಬಣ್ಣ’ (ಛಂದ ಪುಸ್ತಕ ಪ್ರಕಾಶನ) ಹಾಗೂ 2017 ನೆ ಸಾಲಿನ ಮಾಸ್ತಿ ಕಾದಂಬರಿ ಪುರಸ್ಕಾರಕ್ಕೆ ಡಾ.ಬಾಬಾ ಸಾಹೇಬ ಲೋಕಾಪುರ ಅವರ ಕೃಷ್ಣೆ ಹರಿದಳು ಕಾದಂಬರಿ (ಕಣ್ವ ಪ್ರಕಾಶನ) ಆಯ್ಕೆಯಾಗಿದೆ.

ಪ್ರಶಸ್ತಿಯು 25 ಸಾವಿರ ನಗದು, ಫಲಕಗಳನ್ನೊಳಗೊಂಡಿದೆ. ಜೊತೆಗೆ, ಪ್ರಕಾಶಕರಿಗೆ 10 ಸಾವಿರ ಪುರಸ್ಕಾರ ಮೊತ್ತ ನೀಡಲಾಗುತ್ತಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News