ನಾರಾಯಣ ಭಟ್
Update: 2017-05-19 12:40 GMT
ಮಂಗಳೂರು, ಮೇ 19: ಹಿರಿಯ ಟ್ರಾನ್ಸ್ಪೋರ್ಟ್ ಉದ್ಯಮಿ, ವಾಂತಿಚ್ಚಾಲು ನಾರಾಯಣ ಭಟ್ (90) ಮಂಗಳೂರು ಅಳಪೆಯ ಸ್ವಗೃಹದಲ್ಲಿ ನಿಧನರಾದರು.
ಮೂಲತಃ ಕೃಷಿಕರಾದ ನಾರಾಯಣ ಭಟ್, ಕಾಸರಗೋಡಿನ ಪೆರ್ಲದಲ್ಲಿ ಎಸ್ಕೆವಿವಿ ಸಂಘದ ಏಜೆಂಟರಾಗಿ, ಶಿವಪ್ರಸಾದ್ ಟ್ರಾನ್ಸ್ಪೋರ್ಟ್ನ ಮಾಲೀಕರಾಗಿದ್ದರು.
ಪೆರ್ಲ ಮತ್ತು ಮಂಗಳೂರಿನಲ್ಲಿ ಟ್ರಾನ್ಸ್ಪೋರ್ಟ್ ವ್ಯವಹಾರ ನಡೆಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರ ಹಾಗೂ ಏಳು ಮಂದಿ ಪುತ್ರಿಯರನ್ನು ಅಗಲಿದ್ದಾರೆ.