ಆಯುರ್ವೇದಿಕ್ ವೈದ್ಯ ಸಿ.ಎನ್.ಬಿ. ನಾಯರ್
Update: 2017-05-20 16:44 GMT
ಕಡಬ, ಮೇ 20: ಇಲ್ಲಿನ ಖ್ಯಾತ ಆಯುರ್ವೇದಿಕ್ ವೈದ್ಯ ಗೀತಾ ಫಾರ್ಮಸಿಯ ಸಿ.ಎನ್. ಭಾಸ್ಕರನ್ ನಾಯರ್ (84) ಅಸೌಖ್ಯದಿಂದ ಇಂದು ಸಂಜೆ ನಿಧನರಾದರು.
ಮೃತರು ಪತ್ನಿ, ಪುತ್ರ ಮಂಗಳೂರಿನಲ್ಲಿ ವೈದ್ಯನಾಗಿರುವ ಜಯ ಪ್ರಕಾಶ್, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
1964ರಲ್ಲಿ ಕೇರಳದಿಂದ ಕಡಬಕ್ಕೆ ಬಂದು ಕಡಬದಲ್ಲಿ ಸುಮಾರು 55 ವರ್ಷಗಳ ಕಾಲ ವೈದ್ಯ ವೃತ್ತಿಯನ್ನು ನಡೆಸಿದ ಇವರು ಪರಿಸರದಲ್ಲಿ ಜನಾನುರಾಗಿದ್ದರು.
ಹಲವು ಆಯುರ್ವೇದಿಕ್ ಔಷಧಿಗಳನ್ನು ಸ್ವತಃ ತಯಾರಿಸುತ್ತಿದ್ದರು. ಇವರಿಗೆ ಕಡಬ ಜೇಸಿಐಯವರು ಕದಂಬಶ್ರೀ ಪ್ರಶಸ್ತಿ ನೀಡಿದ್ದು ಅಲ್ಲದೆ ಕಡಬ ವರ್ತಕ ಸಂಘದ ವತಿಯಿಂದ ಗೌರವಿಸಲಾಗಿತ್ತು.
ಸಾಮಾಜಿಕ, ಧಾರ್ಮಿಕ ರಾಜಕೀಯ ಮುಖಂಡರು ಅವರ ನಿವಾಸಕ್ಕೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.