ಲಕ್ಷ್ಮಿ ಆಳ್ವ
Update: 2017-05-20 18:20 GMT
ಮಂಗಳೂರು, ಮೇ 20: ಇರಾ ಗ್ರಾಮದ ಕುಕ್ಕಾಜೆ ಬೈಲು ನಿವಾಸಿ ದಿ. ಐತಪ್ಪ ಆಳ್ವಾರ ಪತ್ನಿ ಲಕ್ಷ್ಮಿ ಆಳ್ವ (96) ಅಸೌಖ್ಯದಿಂದ ಇಂದು ನಿಧನರಾದರು.
ಕೃಷಿಕರಾಗಿದ್ದು, ಬಡವರ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿ ಸರ್ವ ಧರ್ಮಿಯರ ಗೌರವಕ್ಕೆ ಪಾತ್ರರಾಗಿದ್ದು, ಅಕ್ಕೆ ಎಂದೇ ಕರೆಸಿಕೊಳ್ಳುತ್ತಿದ್ದರು.
ಮೃತರು ಮಂಚಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮುರಳೀಧರ ಆಳ್ವಾ ಸಹಿತ ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಲಕ್ಷ್ಮಿ ಆಳ್ವಾರ ನಿಧನಕ್ಕೆ ಸಚಿವ ಯು.ಟಿ.ಖಾದರ್, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಸಂತಾಪ ಸೂಚಿಸಿದ್ದಾರೆ.