ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಬಸವನಗೌಡ ಬಾದರ್ಲಿ ಆಯ್ಕೆ

Update: 2017-05-21 14:39 GMT

ಬೆಂಗಳೂರು, ಮೇ 21: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಶಾಸಕ ಹಂಪನಗೌಡ ಬಾದರ್ಲಿ ಸಹೋದರ ಪುತ್ರ ಬಸವನಗೌಡ ಬಾದರ್ಲಿ ಆಯ್ಕೆಯಾಗಿದ್ದಾರೆ.

ಕಳೆದ ವಾರ ನಡೆದಿ ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆಯಲ್ಲಿ ರಾಜ್ಯ ಪದಾಧಿಕಾರಿಗಳ ಮತ ಎಣಿಕೆ ನಿನ್ನೆ ನಗರದ ಅರಮನೆ ಮೈದಾನದಲ್ಲಿ ನಡೆದಿದದು, 9 ಸಾವಿರ ಮತಗಳ ಅಂತರದಲ್ಲಿ ಬಸವಗೌಡ ಬಾದರ್ಲಿ ಗೆಲ್ಲುವ ಮೂಲಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

ಉಪಾಧ್ಯಕ್ಷರಾಗಿ ಕೆಂಪರಾಜ್, ಅಮೃತ್, ರಾಜೇಂದ್ರ ಹಾಗೂ ಮಹಿಳಾ ವಿಭಾಗದ ಮೀಸಲಾತಿಯಲ್ಲಿ ಸುಮಯ ತಬ್ರೇಜ್ ಆಯ್ಕೆಯಾಗಿದ್ದಾರೆ.

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷಗಾದಿಗೆ ತೀವ್ರ ಪೈಪೋಟಿ ನಡೆದಿತ್ತು. ಶಾಸಕ ಕೆ.ಎನ್.ರಾಜಣ್ಣಪುತ್ರ  ರಾಜೇಂದ್ರ, ಬಸವನಗೌಡ ಬಾದರ್ಲಿ, ಉಮೇಶ್‍ ಬೋರೇಗೌಡ, ಅಮೃತ್, ಶಿವಕುಮಾರ್, ಸುಮಯ ತಬ್ರೇಜ್, ಕೆಂಪರಾಜ್ ಹಾಗೂ ಚಿಕ್ಕಮಗಳೂರಿನ ಪುಷ್ಪಲತಾ ಸ್ಪರ್ಧಿಸಿದ್ದರು. ಈ ಪೈಕಿ ಒಬ್ಬರು ಅಧ್ಯಕ್ಷರಾದ ನಂತರ ನಾಲ್ವರು ಅಭ್ಯರ್ಥಿಗಳು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 

ಮೇ 17ರಿಂದ 20ರವರೆಗೆ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಅಕ್ರಮ ಮತದಾನವಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News