ಸಚಿವ ತನ್ವೀರ್ ಸೇಠ್ ದುಬೈ ಪ್ರವಾಸದ ಝಲಕ್ ಗಳು...

Update: 2017-05-22 06:57 GMT

ದುಬೈ, ಮೇ 22: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಅಲ್ಪಸಂಖ್ಯಾತ ಹಾಗೂ ವಕ್ಫ್ ಸಚಿವ ತನ್ವಿರ್‌‌ ಸೇಠ್ ಇತ್ತೀಚೆಗೆ ವಿವಿಧ ಕಾರ್ಯಕ್ರಮಗಳ ನಿಮಿತ್ತ ದುಬೈಗೆ ಭೇಟಿ ನೀಡಿದರು. ಈ ಸಂದರ್ಭ ಉದ್ಯಮಿ ಬಿ.ಆರ್. ಶೆಟ್ಟಿ ಮಾಲಕತ್ವದ ಅಬುಧಾಬಿಯ ಬ್ರೈಟ್ ರೈಡರ್ಸ್ ಸ್ಕೂಲ್ ಗೆ ಸಚಿವರು ಭೇಟಿ ನೀಡಿದರು. ನಂತರ ವಿಪಿಎಸ್ ಹೆಲ್ತ್ ಕೇರ್ ನ ಸ್ಥಾಪಕ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಶಂಶೀರ್ ವಯಲಿಲ್ ಮಾಲಕತ್ವದ ಬುರ್ಜೀಲ್ ಆಸ್ಪತ್ರೆಗೂ ಭೇಟಿಯಿತ್ತರು.

ಈ ಸಂದರ್ಭ ಬ್ಯಾರೀಸ್ ವೆಲ್ಫೇರ್ ಫೋರಂನ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ಯು.ಟಿ.ಇಫ್ತಿಕಾರ್, ಬಿಡಬ್ಲ್ಯುಎಫ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ ಮೊದಲಾದವರು ಉಪಸ್ಥಿತರಿದ್ದರು.

ಇಷ್ಟೇ ಅಲ್ಲದೆ ಅನಿವಾಸಿ ಭಾರತೀಯರು ಹಾಗೂ ಉದ್ಯಮಿಗಳನ್ನು ಭೇಟಿಯಾದ ಸಚಿವರು ಅವರೊಂದಿಗೆ ಸಮಾಲೋಚನೆ ನಡೆಸಿದರು. ಸಚಿವ ತನ್ವಿರ್‌‌ ಸೇಠ್ ಅವರ ದುಬೈ ಪ್ರವಾಸದ ಕೆಲ ಝಲಕ್ ಗಳು ಇಲ್ಲಿವೆ…

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News