ನಿವೃತ್ತ ಕೃಷಿ ಅಧಿಕಾರಿ ಎಚ್. ಶ್ರೀಧರ ಮುದ್ಯ
Update: 2017-05-29 18:08 GMT
ಮೂಡಬಿದಿರೆ, ಮೇ 29: ನಿವೃತ್ತ ಸಹಾಯಕ ಕೃಷಿ ಅಧಿಕಾರಿ, ಮೂಡಬಿದಿರೆ ಜೈನಪೇಟೆಯ ಎಚ್. ಶ್ರೀಧರ ಮುದ್ಯ (91) ಸ್ವಗೃಹದಲ್ಲಿ ನಿಧನರಾದರು.
ಮೃತರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕೃಷಿ ಇಲಾಖೆಯಲ್ಲಿ ಕಡೂರು, ಶ್ರೀರಂಗಪಟ್ಟಣ, ಅರಸೀಕರೆ, ಅರಕಲಗೂಡು, ಕಾರ್ಕಳ, ಸುಳ್ಯ ಮೊದಲಾದೆಡೆ 35 ವರ್ಷ ಕರ್ತವ್ಯ ಸಲ್ಲಿಸಿದ್ದ ಅವರು ಸಾಮಾಜಿಕ, ಧಾರ್ಮಿಕ ರಂಗಗಳಲ್ಲೂ ತೊಡಗಿಸಿಕೊಂಡಿದ್ದರು.