ಉಮೇಶ್ ಆಚಾರ್ಯ
Update: 2017-06-01 17:06 GMT
ಮಂಗಳೂರು, ಜೂ.1: ಮೂಲತಃ ಗುರುಪುರದವರಾಗಿದ್ದು, ಅಡ್ಯಾರ್ ನಿವಾಸಿ ಎಂ. ಉಮೇಶ್ ಆಚಾರ್ಯ (72) ಆಸೌಖ್ಯದಿಂದ ಸ್ವಗೃಹದಲ್ಲಿ ನಿಧನಹೊಂದಿದರು.
ಕದ್ರಿಯಲ್ಲಿ ಕರ್ನಾಟಕ ಪಾಲಿಟೆಕ್ನಿಕ್ನಲ್ಲಿ ಉಪನ್ಯಾಸಕರಾಗಿ ಕಾರ್ಯಾನಿರ್ವಸಿದ ಬಳಿಕ ಸುಂಕದಕಟ್ಟೆ ಎಸ್. ಎನ್. ಎಸ್ ಪಾಲಿಟೆಕ್ನಿಕ್ನಲ್ಲಿ ಪ್ರಾಂಶುಪಾಲರಾಗಿ ಬಳಿಕ ಮುರುಡೇಶ್ವರದಲ್ಲಿರುವ ಆರ್. ಎನ್. ಶೆಟ್ಟಿ ಪಾಲಿಟೆಕ್ನಿಕ್ನಲ್ಲೂ ಕೆಲವು ಕಾಲ ಪ್ರಾಂಶುಪಾಲರಾಗಿದ್ದ ಅವರು ನಗರದ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಫೋರ್ಮೆನ್ ಆಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದರು.