ಐತಪ್ಪ ಬೆಳ್ಚಾಡ

Update: 2017-06-13 16:50 GMT

ಕೊಣಾಜೆ, ಜೂ. 13: ನರಿಂಗಾನ ಗ್ರಾಮದ ಮೂಲತಃ ಪುಂಡಿಕಾ ನಿವಾಸಿ ಪ್ರಸ್ತುತ ಶಾಂತಿಪಳಿಕೆಯಲ್ಲಿ ವಾಸವಿದ್ದ ಪುಂಡಿಕಾ ಐತಪ್ಪ ಬೆಳ್ಚಾಡ (96) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಭೂಸುಧಾರಣೆ ಸೇರಿದಂತೆ ರೈತಸಂಘದ ಮುಖಾಂತರ ರೈತಪರ ಹೋರಾಟದಲ್ಲಿ ಬಹಳಷ್ಟು ಕಾಲ ತೊಡಗಿಸಿಕೊಂಡಿದ್ದರು. ಮೃತರು ಪುತ್ರ ಹಾಗೂ ಆರು ಮಂದಿ ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ