​ಬರ ಅಂದರೆ ಅಧಿಕಾರಿಗಳಿಗೆ ಇಷ್ಟ: ಪುಟ್ಟಸ್ವಾಮಿ

Update: 2017-06-14 14:49 GMT

ಬೆಂಗಳೂರು, ಜೂ.14: ರಾಜ್ಯಕ್ಕೆ ಬರಗಾಲ ಬಂದರೆ ಅಧಿಕಾರಿಗಳಿಗೆ ಸುಗ್ಗಿ. ಜನತೆಗೆ ತಲುಪಬೇಕಾದ ಬರ ಪರಿಹಾರದಲ್ಲಿ ಅಧಿಕಾರಿಗಳು ಸಾಕಷ್ಟು ಭ್ರಷ್ಟಾಚಾರ ನಡೆಸಿರುವ ಹಲವು ಪ್ರಕರಣಗಳಿವೆ ಎಂದು ಬಿಜೆಪಿ ಸದಸ್ಯ ಪುಟ್ಟಸ್ವಾಮಿ ಆರೋಪಿಸಿದ್ದಾರೆ.

ಬುಧವಾರ ವಿಧಾನಪರಿಷತ್‌ನಲ್ಲಿ ರಾಜ್ಯದಲ್ಲಿ ತಲೆದೂರಿರುವ ಬರದ ಸಮಸ್ಯೆ ಕುರಿತು ಮಾತನಾಡಿದ ಅವರು, ಬರಗಾಲದ ಸಮಯದಲ್ಲಿ ಅಧಿಕಾರಿ ವರ್ಗದವರು ಸಾಕಷ್ಟು ಹಣ ಮಾಡಲು ಅವಕಾಶವಿರುತ್ತದೆ. ಹೀಗಾಗಿಯೇ ಅಧಿಕಾರಿಗಳು ರಾಜ್ಯದ ಹಲವು ಕಡೆ ಜಾನುವಾರುಗಳಿಗೆ ಮೇವನ್ನು ಕೊಡದೆ ನಿರ್ಲಕ್ಷವಹಿಸಿರುವುದು ಕಂಡು ಬಂದಿದೆ ಎಂದು ತಿಳಿಸಿದರು.

ಒಟ್ಟಾರೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷದಿಂದಾಗಿ ರಾಜ್ಯದಲ್ಲಿ ಬರಗಾಲವನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಹಾಗೂ ಕೇಂದ್ರ ಸರಕಾರದ ನೀಡಿರುವ ಬರ ಪರಿಹಾರವನ್ನು ಸದ್ಬಳಕೆ ಮಾಡಿಕೊಳ್ಳಲು ಉದಾಸೀನತೆ ತೋರಿಸಲಾಗಿದೆ. ಈ ರೀತಿ ಬಡವರ ಬದುಕಿನಲ್ಲಿ ಚೆಲ್ಲಾಟ ಆಡಬಾರದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News