ಕ್ಯಾಂಪಸ್ ಫ್ರಂಟ್‌ನಿಂದ ರಾಷ್ಟ್ರೀಯ ವಿಚಾರ ಸಂಕಿರಣ

Update: 2017-06-16 13:09 GMT

ಬೆಂಗಳೂರು, ಜೂ.16: ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಸಮಿತಿಯು ‘ಶಿಕ್ಷಣದಲ್ಲಿ ಕೇಸರಿಕರಣ-ವಿದ್ಯಾರ್ಥಿಗಳ ಪ್ರತಿರೋಧ’ ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಜೂ.17ರಂದು ಮಧ್ಯಾಹ್ನ 2 ಗಂಟೆಗೆ ನಗರದ ಮಿಷನ್ ರಸ್ತೆಯಲ್ಲಿರುವ ಎಸ್‌ಸಿಎಂ ಸಭಾಂಗಣದಲ್ಲಿ ಆಯೋಜಿಸಿದೆ.

ಲೇಖಕ ಹಾಗೂ ದಲಿತ ಪರ ಹೋರಾಟಗಾರ ಪ್ರೊ.ಕಾಂಚಾ ಐಲಯ್ಯ ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದು, ದಿಲ್ಲಿ ವಿಶ್ವವಿದ್ಯಾಲಯದ ಪ್ರೊ.ಅಪೂರ್ವಾನಂದ್ ಝಾ, ಲೇಖಕ ಯೋಗೇಶ್ ಮಾಸ್ಟರ್, ಮಾನವ ಹಕ್ಕುಗಳ ಹೋರಾಟಗಾರ ನಗರಗೆರೆ ರಮೇಶ್, ಎಂಪವರ್ ಇಂಡಿಯಾ ಫೌಂಡೇಷನ್‌ನ ಮುಖ್ಯಸ್ಥ ಇ.ಎಂ.ಅಬ್ದುಲ್ ರಹಿಮಾನ್ ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News