ಹಾವು ಕಚ್ಚಿ ಬಾಲಕಿ ಸಾವು

Update: 2017-06-16 14:02 GMT

ಬೆಂಗಳೂರು, ಜೂ.16: ಹಾವು ಕಚ್ಚಿ ಐದು ವರ್ಷದ ಬಾಲಕಿ ಸಾವನ್ನಪ್ಪಿರುವ ದುರ್ಘಟನೆ ಇಲ್ಲಿನ ಎಂ.ಆರ್.ಪಾಳ್ಯ ಬಳಿ ನಡೆದಿದೆ.

ನಗರದ ನಂದಿದುರ್ಗ ರಸ್ತೆಯ ಎಂ.ಆರ್.ಪಾಳ್ಯದ ಸದಾನಂದ್ ಹಾಗೂ ಸುಲೇಮಾ ದಂಪತಿಗಳ ಹಿರಿಯ ಪುತ್ರಿ ಸುಹನಾ(5) ಮೃತಪಟ್ಟ ಬಾಲಕಿ ಎಂದು ತಿಳಿದುಬಂದಿದೆ.
ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಹೊರಗಡೆಯಿಂದ ಬಂದ ಹಾವು ಬಾಲಕಿಯ ಬಲಗೈಗೆ ಕಚ್ಚಿದೆ. ಸ್ವಲ್ಪ ಸಮಯದ ನಂತರ ಬಾಲಕಿಯ ಬಾಯಲ್ಲಿ ನೊರೆ ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡು ಬಾಲಕಿ ಪೋಷಕರಿಗೆ ತಿಳಿಸಿದ್ದಾಳೆ.

ತದನಂತರ ಪೋಷಕರು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆಕೊಂಡು ಹೋಗುವ ಮಾರ್ಗಮಧ್ಯೆಯೇ ಬಾಲಕಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಬಳಿಕ ಸ್ಥಳೀಯರು ಹಾಗೂ ಬಾಲಕಿ ಸಂಬಂಧಿಕರು ಮನೆಯಲ್ಲಿದ್ದ ಹಾವು ಹಿಡಿದು ಸಾಯಿಸಿ ಸುಟ್ಟು ಹಾಕಿರುವುದಾಗಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News