ಜುಬೈಲ್: ಇಂಡಿಯನ್ ಸೋಶಿಯಲ್ ಫೋರಮ್ ನಿಂದ ಇಫ್ತಾರ್ ಕೂಟ

Update: 2017-06-18 18:32 GMT

ಜುಬೈಲ್, ಜೂ.18: ಸೌದಿ ಅರೇಬಿಯಾದಲ್ಲಿ ಅನಿವಾಸಿ ಭಾರತೀಯರ  ಸಾಮಾಜಿಕ ಸೇವೆಯಲ್ಲಿ  ಮಂಚೂಣಿಯಲ್ಲಿರುವ ಇಂಡಿಯನ್ ಸೋಶಿಯಲ್ ಫೋರಮ್ ಈಸ್ಟರ್ನ್ ಪ್ರೊವಿನ್ಸ್ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ಫ್ಯಾಮಿಲಿ ಇಫ್ತಾರ್ ಕೂಟವನ್ನು ಜುಬೈಲ್ ನ ಮರಾಫಿಕ್ ಬೀಚ್ ಕ್ಯಾಂಪಿನಲ್ಲಿ ಆಯೋಜಿಸಲಾಗಿತ್ತು.

ಇಂಡಿಯಾ ಫ್ರಟೆರ್ನಿಟಿ  ಫೋರಮ್ ದೆಹಲಿ ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ಹಕೀಮ್ ಅವರು ರಮಝಾನ್ ಸಂದೇಶ ಪ್ರವಚನವನ್ನು ನೀಡುತ್ತಾ,  ರಮಝಾನ್ ಮಹತ್ವ ಹಾಗೂ  ಜಗತ್ತಿನಾದ್ಯಂತ ಮುಸ್ಲಿಮರ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ನೆನಪಿಸಿ ನಮ್ಮ ಬಾಧ್ಯತೆಗಳ ಬಗ್ಗೆ ವಿವರಿಸಿದರು.

ಇಂಡಿಯನ್ ಸೋಶಿಯಲ್ ಫೋರಮ್ ಜುಬೈಲ್  ತೆಲಂಗಾಣ ಕಾರ್ಯದರ್ಶಿ ಸಾದಿಕ್ ಹಾಗು ಇಂಡಿಯನ್ ಸೋಶಿಯಲ್ ಫೋರಮ್ ಜುಬೈಲ್ ಕರ್ನಾಟಕ  ಬ್ರಾಂಚ್ ಸಮಿತಿ ಅಧ್ಯಕ್ಷ  ಮುಹಮ್ಮದ್ ಶಮೀರ್  ಉಪಸ್ಥಿತರಿದ್ದರು. 

ಬೃಹತ್ ಸಂಖೈಯಲ್ಲಿ ಅನಿವಾಸಿ ಭಾರತೀಯರು ಈ ಇಫ್ತಾರ್ ಸಂಗಮದಲ್ಲಿ ಭಾಗವಹಿಸಿದ್ದರು. ಮುಹಮ್ಮದ್ ಶಮೀರ್ ಸ್ವಾಗತಿಸಿ, ಪ್ರಸ್ಥಾವಿಕ ಬಾಷಣ ಮಾಡಿದರು. ಮಾಸ್ಟರ್ ಸುಲೈಮಾನ್  ಕಿರಾಅತ್ ಪಠಿಸಿದರು. ಇರ್ಷಾದ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News