ಅದಷ್ಟೇ ಕಾರಣ ಸಾಕು ಬಲಿದಾನಕ್ಕೆ!
Update: 2017-06-25 11:25 GMT
ಮಾತೃ ಭೂಮಿಯೇ ಶ್ರೇಷ್ಠ ಅಷ್ಟು ಮಾತ್ರವಲ್ಲ
ಅದು ನಮ್ಮೆಲ್ಲರಿಗಿಂತ ಶ್ರೇಷ್ಠವಾದದು
ಮನುಷ್ಯನಿಂದ ರಚಿಸಲ್ಪಟ್ಟ ಶಾಸನಕ್ಕಿಂತ
ನಿಷ್ಠುರವಾದ ಶಾಸನವೊಂದಿದೆ. ಅದು
ಪ್ರಜೆಗಳ ಹಕ್ಕುಗಳನ್ನು ನಿರ್ಲಕ್ಷಿಸಿ ದೇಶಕ್ಕಾಗಿ ಬಲಿದಾನವಾಗುವ ಮರಣ ಶಾಸನ
ಸ್ವಾತಂತ್ರ್ಯವೊಂದೇ ಸಂತೃಪ್ತಿಯಲ್ಲ
ಜನ ಭಯ ತೊರೆವ
ಘಳಿಗೆಯೊಂದು ಉದಯವಾಗಲಿದೆ
ಅದೇ ಘಳಿಗೆಯಲ್ಲಿ ಆಕ್ರಮಣ, ವಂಚನೆ
ಮಾಯವಾಗಲಿವೆ.
ಭರತ ಖಂಡದ ಹಿರಿಮೆ-ಗರಿಮೆಗಳಷ್ಟೇ ಸಾಕು
ನಾವು ಬದುಕಲಿಕ್ಕೆ, ಆದರೆ ಮರೆಯದಿರು
ಅದಷ್ಟೇ ಕಾರಣ ಸಾಕು ಬಲಿದಾನಕ್ಕೆ.
ನಾನು ಈ ನಾಡಲ್ಲಿ ಜನಿಸಿರುವೆ. ನನ್ನ ದೇಹದ
ಪ್ರತಿಕಣವೂ ಈ ಮಣ್ಣಿನದೇ.
ಇದು ನನ್ನ ಪೊರೆವ ತೊಟ್ಟಿಲು
ನನ್ನ ಅಂತ್ಯವೂ ಇಲ್ಲಿಯೇ.