ಕೆ.ಜೆ. ಕೊಕ್ರಾಡಿ

Update: 2017-07-17 12:20 GMT

ಬೆಳ್ತಂಗಡಿ, ಜು. 17: ನಾಟಕ ರಚನೆಕಾರ, ನಿವೃತ್ತ ಶಿಕ್ಷಕ ಕೆ. ಜೆ. ಕೊಕ್ರಾಡಿ(66) ರವಿವಾರ ನಿಧನರಾದರು.

ಕೊಕ್ರಾಡಿ ಮೂಲದ ಇವರು ಧರ್ಮಸ್ಥಳದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ 3 ದಶಕಗಳ ಕಾಲ ಶಾರೀರಿಕ ಶಿಕ್ಷಣ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ತಮ್ಮ ಸೇವೆಯ ಜೊತೆಗೆ ನಾಟಕಗಳನ್ನು ರಚಿಸಿ ಪ್ರಸಿದ್ಧರಾಗಿದ್ದರು.

ಇವರು ಬರೆದ ಕಾವೇರಿ, ಭಾಗ್ಯಲಕ್ಷ್ಮಿ, ಬೈರನ ಬದುಕು ಮೊದಲಾದ ತುಳು ನಾಟಕಗಳು ಜಿಲ್ಲೆಯಲ್ಲಿ ಬಹಳಷ್ಟು ಪ್ರಖ್ಯಾತಿ ಪಡೆದಿದ್ದವು. ಕೊಕ್ರಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ