ಸುಶೀಲಾ ರಾಮಚಂದ್ರ ಶಾಸ್ತ್ರಿ

Update: 2017-07-18 14:33 GMT

ಮಂಗಳೂರು, ಜು. 18: ನಗರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಶರವು ಮಹಾಗಣಪತಿ ದೇವಸ್ಥಾನದ ಶಿಲೆ ಆಡಳಿತ ಮೊಕ್ತೇಸರ ಶ್ರೀರಾಘವೇಂದ್ರ ಶಾಸ್ತ್ರಿಗಳ ತಾಯಿ ಸುಶೀಲಾ ರಾಮಚಂದ್ರ ಶಾಸ್ತ್ರಿ (91) ಅಸೌಖ್ಯದಿಂದ ಮಂಗಳವಾರ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಡಾ. ಸುಬ್ರಹ್ಮಣ್ಯ ಶಾಸ್ತ್ರಿ, ಡಾ.ಸುದೇಶ ಶಾಸ್ತ್ರಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಕರ್ಣಾಟಕ ಬ್ಯಾಂಕಿನ ಅಧ್ಯಕ್ಷ ಪಿ.ಜಯರಾಮ ಭಟ್, ಅನಂತಕೃಷ್ಣ, ಡಾ. ಸಿ. ಆರ್.ಬಳ್ಳಾಲ್, ಕ್ಯಾ.ಗಣೇಶ್‌ ಕಾರ್ಣಿಕ್, ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಎಸ್. ಪ್ರದೀಪಕುಮಾರ ಕಲ್ಕೂರ, ಸುಧಾಕರ ರಾವ್ ಪೇಜಾವರ, ಸೀತಾರಾಮ ಕುಲಾಲ್, ಬಿ. ವಾಸುದೇವ ರಾವ್ ಮೊದಲಾದವರು ಸುಶೀಲಾ ಶಾಸ್ತ್ರಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ