ನಿಧನ
ಚಿಕ್ಕಮಗಳೂರು, ಜು.20: ಪತ್ರಕರ್ತ ಎಂ.ಎನ್.ಮಂಜುನಾಥ ಅವರ ತಾಯಿ ಮೂಟೇರಿ ಎನ್.ರುಕ್ಮಿಣಿ (89) ಅವರು ಗುರುವಾರ ಬೆಳಗ್ಗೆ ನಿಧನರಾದರು.
ಮೃತರಿಗೆ ಮೂವರು ಪುತ್ರರು, ಓರ್ವ ಪುತ್ರಿ ಇದ್ದಾರೆ. ನಗರದ ಉಪ್ಪಳ್ಳಿ ರುದ್ರ‘ೂಮಿಯಲ್ಲಿ ಗುರುವಾರ ಸಂಜೆ ಅಂತ್ಯಸಂಸ್ಕಾರ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ: ಶಾಸಕ ಸಿ.ಟಿ.ರವಿ, ಮಾಜಿ ಎಂಎಲ್ಸಿ ಎ.ವಿ.ಗಾಯತ್ರಿ ಶಾಂತೇಗೌಡ, ಮಾಜಿ ಶಾಸಕ ಕೆ.ಎಂ.ಕೃಷ್ಣಮೂರ್ತಿ, ಪಲ್ಲವಿ ಸಿ.ಟಿ.ರವಿ, ನಗರಸಭಾ ಸದಸ್ಯ ರೂಬಿನ್ಮೊಸಸ್, ಜೆಡಿಎಸ್ ರಾಜ್ಯ ವಕ್ತಾರ ಎಸ್.ಎಲ್.ಭೋಜೇಗೌಡ, ಪ್ರಮುಖರಾದ ಮಂಜುನಾಥಜೋಷಿ, ಎಸ್.ಎಂ.ಶಂಕರನಾರಾಯಣಭಟ್, ಶಾಂತೇಗೌಡ, ನಗರಸಭಾ ಅಧ್ಯಕ್ಷೆ ಕವಿತಾ ಶೇಖರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಡಿ.ಎಲ್. ವಿಜಯಕುಮಾರ್, ವಕ್ತಾರ ಶಿವಾನಂದಸ್ವಾಮಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಚ್. ದೇವರಾಜ್, ವಕ್ತಾರ ಹೊಲದಗದ್ದೆ ಗಿರೀಶ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ.ರಾಜಶೇಖರ್ ಮತ್ತು ಪದಾಧಿ ಕಾರಿಗಳು ಸಂತಾಪ ಸೂಚಿಸಿದ್ದಾರೆ.