ಕೆ. ನೇಮಿರಾಜ ಪಡಿವಾಳ

Update: 2017-07-21 18:13 GMT

ಮೂಡುಬಿದಿರೆ, ಜು.21: ನಿವೃತ್ತ ಮುಖ್ಯೋಪಾಧ್ಯಾಯ, ಧಾರ್ಮಿಕ ಮುಂದಾಳು ಕೆ. ನೇಮಿರಾಜ ಪಡಿವಾಳ (81) ಜು. 18ರಂದು ಎಡಪದವಿನಲ್ಲಿರುವ ಸ್ವಗೃಹದಲ್ಲಿ ನಿಧನರಾದರು.

ಅವರು ಜೈನ ಸಮಾಜದ ಕೆರ್ವಾಶೆ ಹೋಬಳಿ ಗುರಿಕಾರರಾಗಿದ್ದರು. ಎಡಪದವು ಬ್ರಹ್ಮಬೈದರ್ಕಳ ಗರಡಿಯ ಅನುವಂಶೀಯ ಆಡಳಿತ ಮೊಕ್ತೇಸರರಾಗಿ, ಬೆಳ್ತಂಗಡಿ ತಾಲೂಕಿನ ಪಾರೆಂಕಿ ಮಹಮ್ಮಾಯಿ ಮಾರಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರಾಗಿದ್ದರು. ತಣ್ಣೀರುಪಂತ ಗ್ರಾಮದ ಶ್ರೀ ಶಾರದಾ ಖಾಸಗಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 32 ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಸಂಚಾಲಕರಾಗಿ ದುಡಿದಿದ್ದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ