ಬೈಕ್ ಢಿಕ್ಕಿ: ಹಿಂಬದಿ ಸವಾರನ ಸಾವು

Update: 2017-07-22 15:07 GMT

ಬೆಂಗಳೂರು, ಜು.22: ನಿಂತಿದ್ದ ವ್ಯಾನ್‌ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಸಾವನ್ನಪ್ಪಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ನಡೆದಿದೆ.
ಮೃತನನ್ನು ಆಂಧ್ರಪ್ರದೇಶದ ನರಸಿಂಹರೆಡ್ಡಿ(35) ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಪಿಜಿ ನಡೆಸುತ್ತಿದ್ದ ನರಸಿಂಹರೆಡ್ಡಿ ಸ್ನೇಹಿತನ ಬೈಕ್‌ನಲ್ಲಿ ಶುಕ್ರವಾರ ಸಂಜೆ ಹೋಗುತ್ತಿದ್ದಾಗ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ವ್ಯಾಪ್ತಿಯ ಎಲಿವೇಟೆಡ್ ಫ್ಲೈ ಓವರ್‌ನ ಸಿಂಫೋನಿ ಕಟ್ಟಡದ ಪಕ್ಕ ನಿಲ್ಲಿಸಲಾಗಿದ್ದ ವ್ಯಾನ್‌ಗೆ ಢಿಕ್ಕಿ ಹೊಡೆದಿದೆ.

ಇದರ ಪರಿಣಾಮವಾಗಿ ಬೈಕ್ ಸವಾರರಿಬ್ಬರೂ ಕೆಳಗೆ ಬಿದ್ದಿದ್ದಾರೆ. ಹಿಂಬದಿ ಕುಳಿತಿದ್ದ ನರಸಿಂಹರೆಡ್ಡಿಯವರ ತಲೆಗೆ ಗಂಭೀರ ಪೆಟ್ಟಾದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 
   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News