ಪ್ರಸಾದ್ ಕುಮಾರ್

Update: 2017-07-25 14:24 GMT

ಉಳ್ಳಾಲ,ಜು.25: ತೊಕ್ಕೊಟ್ಟು ಕ್ಲಿನಿಕಲ್ ಲ್ಯಾಬ್ ಮಾಲಕರು, ಶ್ರೀ ಭಗವತೀ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಲಯನ್.ಪ್ರಸಾದ್ ಕುಮಾರ್ ಕೋಟೆಕಾರು(56) ಅವರು ಮಂಗಳವಾರ ಮುಂಜಾನೆ ಕುಂಪಲದ ತನ್ನ ಸ್ವಗೃಹದಲ್ಲಿ ಹೃದಯಾಘಾತಕ್ಕೊಳಗಾಗಿ ನಿಧನರಾದರು.

ತೊಕ್ಕೊಟ್ಟಿನಲ್ಲಿ ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚಿನ ಕಾಲ ಕ್ಲಿನಿಕಲ್ ಲ್ಯಾಬನ್ನು ನಡೆಸಿ ಜನರಿಗೆ ಸೇವೆ ನೀಡುತ್ತಿದ್ದ ಪ್ರಸಾದ್ ಕೋಟೆಕಾರ್ ಅವರು ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಅವರು ಲಯನ್ಸ್ ಕ್ಲಬ್ ಛೋಟಾ ಮಂಗಳೂರಿನ ಮಾಜಿ ಅಧ್ಯಕ್ಷರಾಗಿದ್ದು ಇನ್ನಿತರ ಅನೇಕ ಸಂಘಟನೆಗಳಲ್ಲಿ ತನ್ನನ್ನು ತೊಡಗಿಸಿ ಕೊಂಡಿದ್ದರು. ತುರ್ತಿ ಮಲರಾಯ ತರವಾಡಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು.

ಮೃತರು ಪತ್ನಿ ಶಾಂಭವಿ, ಪುತ್ರಿ ಪ್ರಜ್ವಲ ಪ್ರಸಾದ್, ಪುತ್ರ ವಿಷ್ಣು ಪ್ರಸಾದ್ ಸೇರಿದಂತೆ ಅನೇಕ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ