ಮೃತ್ಯುಂಜಯ.ವಿ.ಬಾಪಟ್

Update: 2017-07-27 12:38 GMT

ಸೊರಬ,ಜು.27 : ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳ ವಿತರಕರಾಗಿದ್ದ ಪಟ್ಟಣದ ಮೃತ್ಯುಂಜಯ.ವಿ.ಬಾಪಟ್(86) ಬುಧವಾರ ತಡರಾತ್ರಿ ತಮ್ಮ ನಿವಾಸದಲ್ಲಿ ನಿಧನರಾದರು.

ಸುಮಾರು 70 ವರ್ಷಗಳಕಾಲ ಸುದೀರ್ಘ ಅವಧಿಯವರೆಗೆ ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಅವರದ್ದಾಗಿದೆ.

ತಮ್ಮ 16ನೇ ವಯಸ್ಸಿನಿಂದಲೇ ಪತ್ರಿಕಾಕ್ಷೇತ್ರಕ್ಕೆ ಕಾಲಿರಿಸಿದ್ದ ಅವರು, 70 ವರ್ಷಗಳ ಹಿಂದೆ ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ತಾಲೂಕಿಗೆ ಪರಿಚಯಿಸಿದರು. ನಂತರದಲ್ಲಿ ವಿಕ್ರಮ, ಪ್ರಜಾಮತ, ತಾಯಿನಾಡು, ಜನವಾಣಿ, ಉದಯವಾಣಿ, ನವಭಾರತ, ಇಂಡಿಯನ್ ಎಕ್ಸ್‍ಪ್ರೆಸ್, ದಿ ಹಿಂದು, ಸ್ಕ್ರೀನ್, ಹೊಸ ದಿಗಂತ, ಪ್ರಜಾ ವಾಣಿ, ಹಾಯ್ ಬೆಂಗಳೂರು, ಲಂಕೇಶ್, ಕರ್ಮವೀರ ಸೇರಿದಂತೆ ಇನ್ನು ಅನೇಕ ಪತ್ರಿಕೆಗಳ ವಿತರಕರಾಗಿದ್ದ ಅವರು ಪ್ರಸ್ತುತ ಕನ್ನಡ ಪ್ರಭ ಪತ್ರಿಕೆಯ ವಿತರಕರಾಗಿದ್ದರು.

 ಮೃತರು ನಾಲ್ಕು ಗಂಡು ಮಕ್ಕಳು ಮತ್ತು ಒರ್ವ ಮಗಳನ್ನು ಹಾಗು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆÉ ಅವರ ಪತ್ನಿ ನಿಧನ ಹೊಂದಿದ್ದರು.

ಅವರ ನಿಧನಕ್ಕೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಅಖಿಲ ಕರ್ನಾಟಕ ಚಿತ್ಪಾವನ ಬ್ರಾಹ್ಮಣ ಸಂಘದ ಮಾಜಿ ಉಪಾಧ್ಯಕ್ಷ ಮಹೇಶ ಗೋಖಲೆ, ಪಟ್ಟಣದ ಬ್ರಾಹ್ಮಣ ಸಮಾಜದ ಅಧ್ಯಕ್ಷ ಪದ್ಮನಾಭ ಭಟ್ಟ, ರಮೇಶ ಬಾಪಟ್, ದಿನಕರ್ ಭಟ್ ಭಾವೆ, ಕಲಾವಿದ ಬಣ್ಣದಬಾಬು, ಮಹೇಶ್ ಪಾಟೇಲ್ ಕಟ್ಟಿನಕೆರೆ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ