ಖೇಲ್ ರತ್ನ ಆಯ್ಕೆ ಸಮಿತಿಗೆ ಸೆಹ್ವಾಗ್, ಪಿ.ಟಿ. ಉಷಾ

Update: 2017-07-27 18:30 GMT

ಹೊಸದಿಲ್ಲಿ, ಜು.27: ಈ ವರ್ಷದ ‘ಖೇಲ್‌ರತ್ನ’ಹಾಗೂ ‘ಅರ್ಜುನ’ ಪ್ರಶಸ್ತಿಯನ್ನು ಆಯ್ಕೆ ಮಾಡಲಿರುವ 12 ಸದಸ್ಯರ ಸಮಿತಿಗೆ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಹಾಗೂ ಖ್ಯಾತ ಅಥ್ಲೀಟ್ ಪಿ.ಟಿ. ಉಷಾ ಅವರನ್ನು ನೇಮಿಸಲಾಗಿದೆ. ಜಸ್ಟಿಸ್(ನಿವೃತ್ತ) ಸಿ.ಕೆ. ಠಾಕೂರ್ ನೇತೃತ್ವದ ಸಮಿತಿಯು ಈವರ್ಷದ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲು ಆ.3 ರಂದು ಸಭೆ ಸೇರಲಿದೆ.

ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಮುಕುಂದ್ ಖಿಲೇಕರ್(ಬಾಕ್ಸಿಂಗ್), ಸುನೀಲ್ ದಾಬ್ಬೊಸ್(ಕಬಡ್ಡಿ), ಎಂ.ಆರ್.ಮಿಶ್ರಾ(ಪತ್ರಕರ್ತ), ಎಸ್, ಕಣ್ಣನ್(ಪತ್ರಕರ್ತ), ಸಂಜೀವ್ ಕುಮಾರ್(ಪತ್ರಕರ್ತ), ಲತಾ ಮಾಧವಿ(ಪ್ಯಾರಾ ಅಥ್ಲೀಟ್), ಅನಿಲ್ ಖನ್ನಾ(ಕ್ರೀಡಾ ಆಡಳಿತಾಧಿಕಾರಿ), ಐ.ಶ್ರೀನಿವಾಸ್(ಸಾಯ್ ಕೇಂದ್ರದ ಡಿಜಿ) ಹಾಗೂ ರಾಜ್‌ವೀರ್ ಸಿಂಗ್(ಕ್ರೀಡಾ ಸಚಿವಾಲಯದ ಜೊತೆ ಕಾರ್ಯದರ್ಶಿ) ಅವರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News