ಸಿರಾಜುಲ್ ಹುದಾ ಪಾಡಿ ಒಮಾನ್ ಸಮಿತಿ ಅಸ್ತಿತ್ವಕ್ಕೆ

Update: 2017-08-01 05:27 GMT

ಮಸ್ಕತ್, ಆ. 1: ಸಿರಾಜುಲ್ ಹುದಾ ಪಾಡಿ ಕನ್ಯಾನ ಇದರ ಒಮಾನ್ ಸಮಿತಿಯನ್ನುಇತ್ತೀಚೆಗೆ ಮಸ್ಕತ್ ಗೋಬ್ರ ಕೆಸಿಎಫ್ ಕಚೇರಿಯಲ್ಲಿ ನೂತನ ಸಮಿತಿಗೆ ಚಾಲನೆ ನೀಡಲಾಯಿತು.

ಉಬೈದ್ ಸಖಾಫಿ ಅವರ ನೇತೃತ್ವದಲ್ಲಿ ನಡೆದ ಹದ್ದಾದ್ ರಾತೀಬ್ ಹಾಗೂ  ಅಬ್ದುಲ್ರಹ್ಮಾನ್ ಇರ್ಷಾದಿ ಅವರ ಪ್ರಾರ್ಥನೆ ಯೊಂದಿಗೆ ಆರಂಭಗೊಂಡಿದ್ದು, ಕೆ ಸಿ ಎಫ್ ಮಸ್ಕತ್ ಝೋನ್ ಅಧ್ಯಕ್ಷ ಝುಬೈರ್ ಸಅದಿ ಪಾಟ್ರಕೋಡಿ ನೇತೃತ್ವ ನೀಡಿದರು. ಉಬೈದುಲ್ಲಾಹ್ ಸಖಾಫಿ ಮಿತ್ತೂರು, ಅಹ್ಮದ್ ನಿಝರ್ ಝುಹ್ರಿ ಕನ್ಯಾನ ಹಾಗು ಹನೀಫ್ ಸಅದಿ ಕುಡ್ತಮೊಗೇರು ಮಾತನಾಡಿದರು. ಖಲಂದರ್ ಬಾವ ಉಸ್ತಾದ್  ಗೇರುಕಟ್ಟೆ ಇವರ ನೇತೃತ್ವದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ರಹೀಂ ಹಾಜಿ ಉಪ್ಪಳ, ಅಧ್ಯಕ್ಷರಾಗಿ ಅಹ್ಮದ್ ನಿಝಾರ್ ಝುಹ್ರಿ ಕನ್ಯಾನ ಪಿಲಿಂಗುಳಿ, ಉಪಾಧ್ಯಕ್ಷರಾಗಿ ಸಮೀರ್ ಕನ್ಯಾನ ಕಬ್ಬಿನ ಮೂಲೆ, ಪ್ರ.ಕಾರ್ಯದರ್ಶಿಯಾಗಿ ರಿಝ್ವಾನ್ ಕೆ.ಸಿ ರೋಡ್, ಜೊ.ಕಾರ್ಯದರ್ಶಿಯಾಗಿ ಸಫ್ವಾನ್ ಪಾಡಿ ಕರೋಪಾಡಿ, ಕೋಶಾಧಿಕಾರಿಯಾಗಿ ಮುಸ್ತಫಾ ಉಪ್ಪಳ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಝುಬೈರ್ ಸಅದಿ ಪಾಟ್ರಕೋಡಿ, ಹನೀಫ್ ಸಅದಿ ಕುಡ್ತಮುಗೇರ್, ನಾಸಿರ್ ಮುದುಂಗಾರ್ ಕಟ್ಟೆ, ಝಾಕಿರ್ ಸುರತ್ಕಲ್, ಉಮ್ಮರ್ ಪಾರೆ, ಶಿಫಾದ್ ದೇರಳ ಕಟ್ಟೆ, ಶಫೀಕ್ ಉಜಿರೆ, ಮುಹಮ್ಮದ್ ಕಿಲ್ಲೂರ್, ರಿಝ್ವಾನ್ ಕಬಕ, ಅಬ್ಬಾಸ್ ಮರಕ್ಕಡ, ಅಶ್ರಫ್ ಭಾರತ್ ಸುಳ್ಯ, ಸಲಾಂ ಕೇರಳ, ಇಮ್ರಾನ್ ಕೊಲ್ಲಂ, ಹನೀಫ್ ಮನ್ನಾಪು ಇರ್ದೆ, ಯಾಕೂಬ್ ಕಬಕ, ಇರ್ಫಾನ್ ಕೂರ್ನಡ್ಕ, ಶರೀಫ್  ಬೇಡಗುಡ್ಡೆ, ಎಂಬವರನ್ನು ಆಯ್ಕೆ ಮಾಡಲಾಯಿತು. ಕೆಸಿಎಫ್ ಒಮಾನ್ ರಾಷ್ಟ್ರಾಧ್ಯಕ್ಷ ಉಮ್ಮರ್ ಸಖಾಫಿ ಮಿತ್ತೂರು ಸಾಮೂಹಿಕ ಪ್ರಾರ್ಥಣೆ ನಡೆಸಿದರು. ನಿಝಾರ್ ಝುಹ್ರಿ ಕನ್ಯಾನ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ಅಬ್ದುಲ್ ಮುಬಾರಕ್ ಕಾರಾಜೆ

contributor

Editor - ಅಬ್ದುಲ್ ಮುಬಾರಕ್ ಕಾರಾಜೆ

contributor

Similar News